ಕ್ರೈಂವೈರಲ್ ನ್ಯೂಸ್

ಮುಗ್ಧ ಶಿಶುವನ್ನು ಪೊದೆಯಲ್ಲಿ ಎಸೆದದ್ದಾದ್ರು ಏಕೆ? ರಾತ್ರಿಯಿಡೀ ನರಳಿದ ಕಂದನ ಆಕ್ರಂದನ ಯಾರಿಗೂ ಕೇಳಲಿಲ್ಲವೇ? ಏನಿದು ಅಮಾನವೀಯ ಘಟನೆ?

199

ನ್ಯೂಸ್ ನಾಟೌಟ್: ಹಲವರು ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಿಲ್ಲವಲ್ಲಾ ಎಂಬ ಕೊರಗಿನಲ್ಲಿ ಸಿಕ್ಕ – ಸಿಕ್ಕ ದೈವ – ದೇವರಿಗೆ ಹರಕೆ ಹೇಳುತ್ತಾರೆ, ಅದೆಷ್ಟೋ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಂಡು ಕೊರಗಿನಲ್ಲೇ ಇರುತ್ತಾರೆ.

ಆದರೆ, ಬೆಳಗಾವಿಯ ರಾಮತೀರ್ಥ ನಗರದ ಕಟ್ಟಡವೊಂದರ ಕಾಂಪೌಂಡ್‌ ಬದಿಯ ಪೊದೆಯೊಳಗೆ ಎಸೆದಿದ್ದ ನವಜಾತ ಗಂಡು ಶಿಶು ರಾತ್ರಿಯಿಡೀ ನರಳಾಡಿ ಕೊನೆಯುಸಿರೆಳೆದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

ತಾಯಿಯ ಮಡಿಲಲ್ಲಿ ಆರೈಕೆಯಾಗಬೇಕಿದ್ದ ಶಿಶುವನ್ನು ಗಿಡಗಂಟಿಯಲ್ಲಿ ಎಸೆದು ಅಮಾನವೀಯತೆ ತೋರಿದ್ದಾರೆ. ಪೋಷಕರೇ ಶಿಶುವನ್ನು ಬಿಸಾಕಿದ್ದಾರೆಯೇ ಅಥವಾ ಬೇರೆ ಯಾರಾದರೂ ಈ ಕೃತ್ಯ ಎಸಗಿದ್ದಾರಾ ಎಂಬುದು ಪತ್ತೆಯಾಗಬೇಕಿದೆ.
ಸ್ಥಳಕ್ಕೆ ಮಾಳಮಾರುತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾತ್ರಿಯಿಡೀ ನರಳಿ ನರಳಿ ಪ್ರಾಣಬಿಟ್ಟ ಶಿಶುವಿನ ಮೃತದೇಹವನ್ನು ಮರಣೊತ್ತರ ಪರೀಕ್ಷೆಗಾಗಿ ಬಿಮ್ಸ್‌ ಆಸ್ಪತ್ರೆಗೆ ರವಾನಿಸಲಾಗಿದೆ.

ಗಿಡಗಂಟಿಗಳ ಮಧ್ಯೆ ಇಂದು ಬೆಳಗ್ಗೆ ನವಜಾತ ಗಂಡು ಶಿಶುವನ್ನು ನೋಡಿದ ಸ್ಥಳೀಯರು ತಕ್ಷಣವೇ ರಕ್ಷಣೆಗೆ ಧಾವಿಸಿದ್ದರು. ಆದ್ರೆ ಅದಾಗಲೇ ಶಿಶು ಕೊನೆಯುಸಿರೆಳೆದಿತ್ತು. ಆಗ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಆಗಮಿಸಿ, ಮರಣೋತ್ತರ ಪರೀಕ್ಷೆಗೆ ಬಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.

See also  ‘ಫ್ರೀ ಪ್ಯಾಲೆಸ್ತೀನ್’ ಎಂದು ಕೂಗುತ್ತಾ ಸಾರ್ವಜನಿಕರ ಮೇಲೆ ಪೆಟ್ರೋಲ್ ಬಾಂಬ್ ಎಸೆದ ವ್ಯಕ್ತಿ..! 6 ಜನ ಆಸ್ಪತ್ರೆಗೆ ದಾಖಲು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget