ನ್ಯೂಸ್ ನಾಟೌಟ್: ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಹಿನ್ನೆಲೆ ಐಪಿಎಲ್ ಪಂದ್ಯಾವಳಿಯನ್ನು ಅನಿರ್ದಿಷ್ಟಾವಧಿ ಸ್ಥಗಿತಗೊಳಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಗುರುವಾರ ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ಪಂಜಾಬ್-ದಿಲ್ಲಿ ನಡುವೆ ನಡೆಯುತ್ತಿದ್ದ ಐಪಿಎಲ್ ಪಂದ್ಯಾಟವನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ಪಂದ್ಯಾವಳಿಯನ್ನು ಅನಿರ್ದಿಷ್ಟಾವಧಿ ಸ್ಥಗಿತಗೊಳಿಸುವ ನಿರ್ಧಾರವನ್ನು ತಿಳಿಸಿದೆ.
ಪಾಕಿಸ್ತಾನ ಹಾರಿಸಿದ ಹಲವು ಕ್ಷಿಪಣಿಗಳಲ್ಲಿ ಒಂದು ಹೋಶಿಯಾರ್ ಪುರದ ಮುಕೇರಿಯನ್ ಕ್ಷೇತ್ರದ ಬಹ್ ಫಟ್ಟಾ ಗ್ರಾಮದ ಹೊಲಗಳಲ್ಲಿ ಪತ್ತೆಯಾಗಿ ಆತಂಕ ಸೃಷ್ಟಿಸಿದೆ. ಪಾಕಿಸ್ತಾನವು ದಾಸುಹಾ ಪ್ರದೇಶದಲ್ಲಿ ಹಲವು ಬಾರಿ ಕ್ಷಿಪಣಿ ದಾಳಿ ನಡೆಸಿದೆ.
ಬೆಂಗಳೂರಿನ HSL ನಲ್ಲೂ ಹೈ ಅಲರ್ಟ್..! ಚಂಢೀಗಡದಲ್ಲಿ ಸೈರನ್, ಪಾಕ್ ನಿಂದ ಮತ್ತೆ ದಾಳಿಯ ಮುನ್ಸೂಚನೆ..!