ಬೆಂಗಳೂರು

ಕೋರಮಂಗಲ ಭೀಕರ ಅಪಘಾತಕ್ಕೆ ಇಂದ್ರಜಿತ್ ಲಂಕೇಶ್ ಕೊಟ್ರು ಕಾರಣ

969
G.L.SURESH

ಬೆಂಗಳೂರು: ಕೋರಮಂಗಲದಲ್ಲಿ ಸಂಭವಿಸಿದ ಭೀಕರ ಆಡಿ ಕಾರು ಅಪಘಾತಕ್ಕೆ ಸಂಬಂಧಪಟ್ಟಂತೆ ನಿರ್ದೇಶಕ ಇಂದ್ರಜಿತ್‌ ಲಂಕೇಶ್ ಸ್ಫೋಟಕ ಮಾಹಿತಿಯನ್ನು ತಿಳಿಸಿದ್ದಾರೆ. ಡ್ರಗ್ಸ್ ಸೇವಿಸಿ ಚಾಲನೆ ನಡೆಸಿರಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಸಾಮಾನ್ಯವಾಗಿ ಮದ್ಯ ಸೇವನೆ ಮಾಡಿದಾಗ ಇಷ್ಟೊಂದು ಭೀಕರವಾಗಿ ಅಪಘಾತವಾಗುವುದಕ್ಕೆ ಸಾಧ್ಯವಾಗುವುದಿಲ್ಲ. ಯಾವಾಗ ತಮ್ಮ ಮೇಲೆ ತಮಗೆ ನಿಯಂತ್ರಣವೇ ಇರುವುದಿಲ್ಲವೋ ಅಂತಹ ಸಮಯದಲ್ಲಿ ಇಷ್ಟು ಭೀಕರವಾಗಿ ಅಪಘಾತವಾಗುತ್ತದೆ. ಅಪಘಾತ ನಡೆದ ಸ್ಥಳ ನನ್ನ ಮನೆಯ ಪಕ್ಕದ ರೋಡ್. ಅಲ್ಲಿ ಆರಾಮವಾಗಿ ವಾಹನ ಚಲಾಯಿಸಬಹುದು. ಆದರೆ ಇವರು ಬಂದು ಗುದ್ದಿರುವ ರಭಸ ನೋಡಿದರೆ ಸಾಕಷ್ಟು ಅನುಮಾನಗಳಿದೆ ಎಂದು ತಿಳಿಸಿದ್ದಾರೆ. ಅಪಘಾತದಲ್ಲಿ ಹೊಸೂರು ಶಾಸಕನ ಪುತ್ರ ಸೇರಿದಂತೆ ಒಟ್ಟು ಏಳು ಮಂದಿ ಮೃತಪಟ್ಟಿದ್ದರು.

See also  ಶಾಸಕನ ಬೆಂಬಲಿಗರಿಂದ ಸಾಕ್ಷಿದಾರರ ಮನೆಗೆ ನುಗ್ಗಿ ಬೆದರಿಕೆ..! ಮುನಿರತ್ನ ವಿರುದ್ಧ ಸಾಕ್ಷಿ ಹೇಳಿದ್ರೆ ಮನೆಗೆ ಬೆಂಕಿ ಹಚ್ಚುತ್ತೇವೆ ಎಂದ ಮಹಿಳೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget