Latestಸಿನಿಮಾ

ಭೀಕರ ಕಾರು ಅಪಘಾತದಲ್ಲಿ ಗಾಯಕ ಪವನ್ ದೀಪ್ ರಾಜನ್ ಗೆ ಗಂಭೀರ ಗಾಯ: ಜನಪ್ರಿಯ ರಿಯಾಲಿಟಿ ಶೋ ಗೆದ್ದಿದ್ದ ಗಾಯಕನಿಗೇನಾಯ್ತು?

456

ನ್ಯೂಸ್‌ ನಾಟೌಟ್: ಗಾಯಕ ಪವನ್‌ದೀಪ್ ರಾಜನ್ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.ಜನಪ್ರಿಯ ರಿಯಾಲಿಟಿ ಶೋನ ವಿಜೇತರಾಗಿ ಗುರುತಿಸಿಕೊಂಡಿರುವ ಇವರು ಇಂಡಿಯನ್ ಐಡಲ್ ಸೀಸನ್ 12 ವಿಜೇತರಾಗಿದ್ದರು.

ಸೋಮವಾರ (ಮೇ.5) ಮುಂಜಾನೆ 3ರ ಅಸುಪಾಸಿನಲ್ಲಿಉತ್ತರ ಪ್ರದೇಶದ ಅಮ್ರೋಹಾದ ರಾಷ್ಟ್ರೀಯ ಹೆದ್ದಾರಿ 9 ರಲ್ಲಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದ್ದು, ಪವನ್‌ದೀಪ್ ರಾಜನ್ ಅವರು ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದಾರೆ ಎನ್ನಲಾಗಿದೆ.ಪವನ್‌ದೀಪ್ ಅವರ ಎಂಜಿ ಹೆಕ್ಟರ್ ಕಾರು ನಿಲ್ಲಿಸಿದ್ದ ಐಷರ್ ಕ್ಯಾಂಟರ್ ಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಪಘಾತವಾದ ಬಳಿಕ ಮೊದಲು ಗಾಯಾಳು ಪವನ್‌ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಗಾಯ ಗಂಭೀರವಾದ ಕಾರಣ ನೋಯ್ಡಾದ ಮತ್ತೊಂದು ಆಸ್ಪತ್ರೆಗೆ ಅವರನ್ನು ರವಾನಿಸಲಾಗಿದೆ ಎಂದು ವರದಿ ತಿಳಿಸಿದೆ.ಅಪಘಾತದಲ್ಲಿ ಪವನ್‌ದೀಪ್ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪವನ್‌ದೀಪ್ ಉತ್ತರಾಖಂಡದ ಚಂಪಾವತ್‌ನಿಂದ ದೆಹಲಿಗೆ ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.ಪವನ್‌ದೀಪ್ ರಾಜನ್ ಇಂಡಿಯನ್ ಐಡಲ್ 12 ಗೆದ್ದು, 25 ಲಕ್ಷ ರೂ. ಚೆಕ್ ಮತ್ತು ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಬಹುಮಾನವಾಗಿ ಪಡೆದುಕೊಂಡಿದ್ದರು.

See also  ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿಲ್ಲ ಎಂದ ಅಣ್ಣಾಮಲೈ..! ಉಡುಪಿಗೆ ಬಂದಿದ್ದ ವೇಳೆ ಹೇಳಿಕೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget