Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಪಹಲ್ಗಾಮ್‌ ದಾಳಿ ಬೆಂಬಲಿಸಿ ಪೋಸ್ಟ್‌ ಹಾಕಿದ್ದ ಶಾಸಕ, ಶಿಕ್ಷಕ, ವಕೀಲ ಅರೆಸ್ಟ್‌..! ದೇಶ ವಿರೋಧಿ ಸಂದೇಶ ಹರಡಿದ್ದ 19 ಮಂದಿಯ ಬಂಧನ..!

1k

ನ್ಯೂಸ್ ನಾಟೌಟ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ನಲ್ಲಿ ನಡೆದ ಉಗ್ರರ ದಾಳಿಯನ್ನು ಬೆಂಬಲಿಸಿ ಪೋಸ್ಟ್‌ ಹಾಕಿದ್ದ ಶಾಸಕ, ನಿವೃತ್ತ ಶಿಕ್ಷಕ, ವಕೀಲ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ದೇಶಾದ್ಯಂತ 19 ಜನರನ್ನು ಬಂಧಿಸಲಾಗಿದೆ.

ಅಸ್ಸಾಂನ ವಿರೋಧ ಪಕ್ಷವಾದ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ನ ಶಾಸಕ ಅಮೀನುಲ್ ಇಸ್ಲಾಂ ರನ್ನು ಗುರುವಾರ(ಎ.24) ಬಂಧಿಸಲಾಗಿತ್ತು. ಅವರು, 2019ರ ಪುಲ್ವಾಮಾ ದಾಳಿ ಮತ್ತು ಪಹಲ್ಗಾಮ್ ದಾಳಿಯು ಕೇಂದ್ರ ಸರ್ಕಾರದ ಪಿತೂರಿ ಎಂದು ಆರೋಪಿಸಿದ್ದರು. ಅವರನ್ನು ಬಂಧಿಸಿ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು.
ಶುಕ್ರವಾರದವರೆಗೆ ಅಸ್ಸಾಂನಲ್ಲಿ ಬಂಧಿಸಲಾದ ಹೈಲಕಂಡಿಯ ಎಂಡಿ ಜಬೀರ್ ಹುಸೇನ್, ಸಿಲ್ಚಾರ್‌ನ ಎಂಡಿ ಎಕೆ ಬಹಾವುದ್ದೀನ್ ಮತ್ತು ಎಂಡಿ ಜಾವೇದ್ ಮಜುಂದಾರ್, ಮೋರಿಗಾಂವ್‌ನ ಎಂಡಿ ಮಹಾಹರ್ ಮಿಯಾ ಮತ್ತು ಎಂಡಿ ಸಾಹಿಲ್ ಅಲಿ ಸೇರಿದ್ದಾರೆ. ಕರೀಂಗಂಜ್‌ನ ಎಂಡಿ ಮುಸ್ತಾ ಅಹ್ಮದ್ ಅಲಿಯಾಸ್ ಸಹೇಲ್ ಶುಕ್ರವಾರ ರಾತ್ರಿ ಫೇಸ್‌ಬುಕ್‌ ನಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಪೋಸ್ಟ್ ಮಾಡಿದ್ದ. ಆತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಬಂಧಿತ ಹುಸೇನ್ ಪತ್ರಕರ್ತನಾಗಿದ್ದಾನೆ. ಬಹಾವುದ್ದೀನ್ ಸಿಲ್ಚಾರ್‌ನಲ್ಲಿರುವ ಅಸ್ಸಾಂ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದಾನೆ. ಮಜುಂದಾರ್ ವಕೀಲನಾಗಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಎಂಡಿ ಜರೀಫ್ ಅಲಿ ಮತ್ತು ವಿದ್ಯಾರ್ಥಿ ಸಂಘಟನೆಯಾದ ಸತ್ರ ಮುಕ್ತಿ ಸಂಗ್ರಾಮ್ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ಅನಿಲ್ ಬನಿಯಾನನ್ನು ಶನಿವಾರ ಬಿಸ್ವಾನಾಥ್‌ನಲ್ಲಿ ಬಂಧಿಸಲಾಗಿತ್ತು. ಸುಮನ್ ಮಜುಂದಾರ್ ಅಲಿಯಾಸ್ ಬುಲ್ಬುಲ್ ಅಲೋಮ್ ಮಜುಂದಾರ್‌ನನ್ನು ಹೈಲಕಂಡಿಯಲ್ಲಿ, ಮಶುದ್ ಅಜರ್‌ನನ್ನು ನಾಗಾಂವ್‌ನಲ್ಲಿ ಮತ್ತು ಗುವಾಹಟಿ ಬಳಿಯ ಹಜೋದಿಂದ ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಇವರೆಲ್ಲ ಸಾಮಾಜಿಕ ಜಾಲತಾಣದಲ್ಲಿ ದೇಶ ವಿರೋಧಿ ಕಾಮೆಂಟ್‌ ಗಳನ್ನು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸೇನಾ ಕಾರ್ಯಾಚರಣೆಯ ನೇರ ಪ್ರಸಾರ ಮಾಡದಂತೆ ಕೇಂದ್ರದಿಂದ ಮಾಧ್ಯಮಗಳಿಗೆ ಸೂಚನೆ..! ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಮಾರ್ಗಸೂಚಿ ಬಿಡುಗಡೆ..!

See also  ಈಕೆ ಅಂದು ಬಾಲನಟಿ ಇಂದು ಐಎಎಸ್ ಆಫೀಸರ್, ರಮೇಶ್​​ ಅರವಿಂದ್ ಜತೆ ಆ ಪುಟ್ಟ ಬಾಲಕಿ ಯಾರು..?
  Ad Widget   Ad Widget     Ad Widget   Ad Widget   Ad Widget   Ad Widget