Latestಕ್ರೈಂದೇಶ-ವಿದೇಶ

ಭಾರತದ ಮೇಲೆ ಮಿಸೈಲ್ ದಾಳಿಗೆ ಯತ್ನಿಸಿದ ಪಾಕ್..! ಹೊಡೆದುರುಳಿಸಿದ ಭಾರತೀಯ ಏರ್​ ಡಿಫೆನ್ಸ್​ ಸಿಸ್ಟಮ್..!

495

ನ್ಯೂಸ್ ನಾಟೌಟ್: ಆಪರೇಷನ್ ಸಿಂಧೂರ ಬಳಿಕ ಪಾಕಿಸ್ತಾನ ತತ್ತರಿಸಿ ಹೋಗಿದೆ. ಇದೀಗ ಭಾರತದ ಮೇಲೆ ದಾಳಿ ಮಾಡುವಂತಹ ಪ್ರಯತ್ನ ಮಾಡ್ತಿದೆ. ಪಂಜಾಬ್ ​ನ ಅಮೃತಸರ ಬಳಿ ಕ್ಷಿಪಣಿ ಅಟ್ಯಾಕ್ ​ಗೆ ಪ್ರಯತ್ನಿಸಿದೆ.

ಆದರೆ ಅದು ನಮ್ಮ ಏರ್​ ಡಿಫೆನ್ಸ್ ಸಿಸ್ಟಮ್ ​ಗೆ ಗೊತ್ತಾಗಿದೆ. ಕೂಡಲೇ ಅಲರ್ಟ್​ ಆದ ಸೇನೆ ಏರ್ ಡಿಫೆನ್ಸ್ ಸಿಸ್ಟಮ್​ ಮೂಲಕ ಹೊಡೆದು ಹಾಕಲಾಗಿದೆ.

ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಕಳೆದ ಮಂಗಳವಾರ ತಡರಾತ್ರಿ ಭಾರತದ ಸೇನೆ ಆಪರೇಷನ್ ಸಿಂಧೂರ್ ನಡೆಸಿತ್ತು. ಭಾರತೀಯ ಭೂ ಸೇನೆ ಹಾಗೂ ವಾಯುಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಪಾಕ್​ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳನ್ನು ಧ್ವಂಸಗೊಂಡಿವೆ. ಒಟ್ಟು 21 ಉಗ್ರರ ನೆಲೆಗಳ ಮೇಲೆ ಭಾರತ ಅಟ್ಯಾಕ್ ಮಾಡಿ ಛಿದ್ರಛಿದ್ರ ಮಾಡಿದೆ. ಈ 21 ಉಗ್ರ ನೆಲೆಗಳಲ್ಲಿ 9 ಉಗ್ರರ ಪ್ರಮುಖ ಅಡುಗುತಾಣಗಳಾಗಿದ್ದವು.

ಆಪರೇಷನ್ ಸಿಂಧೂರ್​​ನಿಂದ ಕಂಗೆಟ್ಟಿರುವ ಪಾಕ್, ಭಾರತದ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಮತ್ತೆ ಮತ್ತೆ ಪ್ರಯತ್ನಿಸಿ ಸೋಲುತ್ತಿದೆ.

ಸುಳ್ಯ: ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ..! ಮದುವೆಗೆ ಕೆಲವೇ ದಿನಗಳಿರುವಾಗ ಘಟನೆ..!

See also  ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ಪಾಕಿಸ್ತಾನದ 11 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದ ಪಾಕ್..! 78 ಮಂದಿಗೆ ಗಾಯ..!
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget