ಕರಾವಳಿಕ್ರೈಂಪುತ್ತೂರು

ಕುಂಬ್ರದ ಶೇಖಮಲೆಯಲ್ಲಿ ಭೀಕರ ಅಫಘಾತ! ಓವರ್ ಟೇಕ್ ಮಾಡುವ ಭರದಲ್ಲಿ ಅಚಾತುರ್ಯ!

384

ನ್ಯೂಸ್ ನಾಟೌಟ್: ಪುತ್ತೂರು ಕಡೆ ತೆರಳುತ್ತಿದ್ದ ಕಾರೊಂದು ಓವರ್ ಟೇಕ್ ಮಾಡುವ ಭರದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಆಪೆ ರಿಕ್ಷಾಗೆ ಢಿಕ್ಕಿ ಹೊಡೆದ ಘಟನೆ ಬುಧವಾರ ಕುಂಬ್ರ ಸಮೀಪದ ಶೇಕಮಲೆ ಎಂಬಲ್ಲಿ ಸಂಭವಿಸಿದೆ.

ಕಾರು ಓವರ್ ಟೇಕ್ ಮಾಡುವ ರಭಸದಲ್ಲಿ ಅದರ ವಿರುದ್ಧ ದಿಕ್ಕಿನಿಂದ ಬಂದ ಆಪೆರಿಕ್ಷಾಗೆ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಅಪಘಾತದ ರಭಸಕ್ಕೆ ರಿಕ್ಷಾ ಪಲ್ಟಿಯಾಗಿದ್ದು, ರಿಕ್ಷಾ ಚಾಲಕನಿಗೆ ಅಲ್ಪ ಸ್ವಲ್ಪ ಗಾಯಗಳಾಗಿವೆ.

ಇದೇ ಸ್ಥಳದಲ್ಲಿ ತಿಂಗಳುಗಳ ಹಿಂದೆ ಐರವಾತ ಬಸ್ಸು ಮತ್ತು ಇನ್ನೋವಾ ಕಾರು ನಡುವೆ ಅಪಘಾತ ಸಂಭವಿಸಿತ್ತು, .ಇದು ಅಫಘಾತ ವಲಯವಾಗುತ್ತಿದೆ ಎಂದು ವರದಿ ತಿಳಿಸಿದೆ.

See also  ಸುಳ್ಯದಲ್ಲಿ ಜಿ. ಕೃಷ್ಣಪ್ಪ ಕಾಂಗ್ರೆಸ್‌ ಮುನ್ನಡೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget