ಕ್ರೈಂ

ಅಸ್ಪೃಶ್ಯತೆ ಇನ್ನೂ ಜೀವಂತ..! ದೇವಾಲಯ ಪ್ರವೇಶಿದ್ದ ದಲಿತ, 20 ಜನರಿಂದ ಮಾರಣಾಂತಿಕ ಹಲ್ಲೆ!

313

ನ್ಯೂಸ್ ನಾಟೌಟ್ :  ಮುಜರಾಯಿ ಇಲಾಖೆ ದೇವಾಲಯ ಆಗಿದ್ದರು ದಲಿತರನ್ನು ಒಳಗೆ ಬಿಟ್ಟಿರಲಿಲ್ಲ ಎಂಬ ಕಾರಣಕ್ಕೆ ಜಗಳ ನಡೆದಿದೆ, ಈ ವೇಳೆ ದೇವಾಲಯ ಪ್ರವೇಶ ಮಾಡಿದ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತುಮಕೂರು‌ ಜಿಲ್ಲೆಯ ತಿಪಟೂರು ತಾಲೂಕಿನ ಬಿದರೆಗುಡಿಯಲ್ಲಿ ಬಾನುವಾರ ನಡೆದಿದೆ.

ಕಳೆದ ಮೂರು ದಿನಗಳಿಂದ ಬಿದಿರಾಂಭಿಕ ದೇವಾಲಯದ ಜಾತ್ರೆ ನಡೆಯುತ್ತಿದೆ. ಜಾತ್ರೆ ಹಿನ್ನೆಲೆ ಗ್ರಾಮದ ದಲಿತ ಯುವಕ ಲಿಂಗರಾಜು ದೇವಾಲಯದ ಒಳಗೆ ಪ್ರವೇಶಿಸಿದ್ದರು. ಈ ವೇಳೆ ಸವರ್ಣಿಯರಾದ ಶಿವಕುಮಾರ್ ಮತ್ತು ಆತನ ಸಹಚರರು ಲಿಂಗರಾಜು ಮೇಲೆ ದೊಣ್ಣೆ ಮತ್ತು ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿದ್ದಾರೆ. ದೇವಾಲಯದಲ್ಲಿನ ಅಸ್ಪೃಶ್ಯತೆ ಆಚರಣೆಯ ಬಗ್ಗೆ ಈ ಹಿಂದೆ ತಹಶೀಲ್ದಾರ್ ಗಮನಕ್ಕೆ ತರಲಾಗಿತ್ತು.

ಆದರೆ ತಹಶೀಲ್ದಾರ್​ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬ ಆರೋಪಗಳನ್ನು ಗ್ರಾಮಸ್ಥರು ಮಾಡಿದ್ದಾರೆ. “ನಾವು ಜಾತ್ರೆಗೆ ಹೋದಾಗ ಗೌಡರು ನಮ್ಮ ಜೊತೆ ಮಾತನಾಡಬೇಕು ಎಂದು ಕರೆದುಕೊಂಡು ಹೋದರು. ಅಲ್ಲಿಗೆ ಹೋಗುತ್ತಲೇ ಜಾತಿ ನಿಂದನೆ ಮಾಡಿ ಸುಮಾರು 20 ಜನರು ಜೊತೆಯಾಗಿ ಹಲ್ಲೆ ನಡೆಸಿದರು. ಅದು ಮುಜರಾಯಿ ಇಲಾಖೆಯಾದ್ರೂ ನಮಗೆ ಒಳ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ” ಎಂದು ಹಲ್ಲೆಗೊಗಾದ ಲಿಂಗರಾಜು ಹೇಳಿದ್ದಾರೆ.

ಸದ್ಯ ಲಿಂಗರಾಜು ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಹೊನ್ನವಳ್ಳಿ ಮತ್ತು ತಿಪಟೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

See also  ನಟ ವಿಶಾಲ್ ಬಡ್ಡಿ ಸಮೇತ 27.68 ಕೋಟಿ ಹಣ ನೀಡುವಂತೆ ಮದ್ರಾಸ್ ಹೈಕೋರ್ಟ್ ಆದೇಶ..! ನೀಡದಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget