ಕರಾವಳಿ

ಸುಳ್ಯದಲ್ಲಿ ಮರಳು ಮಾಫಿಯಾ ೩ ಲಾರಿ ವಶಕ್ಕೆ ಪಡೆದ ಅಧಿಕಾರಿಗಳು

323

ನ್ಯೂಸ್ ನಾಟೌಟ್ : ಅಕ್ರಮ ಗಣಿಗಾರಿಕೆ ಮತ್ತು ಮರಳು ಸಾಗಾಟದ ಮೇಲೆ  ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.ಅದರ ಮೇಲೆ ದಾಳಿಗಳು ನಿರಂತರವಾಗಿ ನಡೆಯುತ್ತಿದೆ. ಇಂದು ಅಜ್ಜಾವರದಲ್ಲಿ  ಕೂಡ ಅಕ್ರಮವಾಗಿ ಮರಳು ಮತ್ತು ಕಲ್ಲು ಸಾಗಾಟ ಮಾಡುತ್ತಿದ್ದ ವಾಹನಗಳನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿರುವ ಬಗ್ಗೆ ವರದಿಯಾಗಿದೆ.

ಅಜ್ಜಾವರ ಗ್ರಾಮದ ವಿ.ಎ ಶರತ್ ನೇತೃತ್ವದಲ್ಲಿ ಆಲೆಟ್ಟಿ ಮಿತ್ತಡ್ಕ ಬಳಿ,  ಅಜ್ಜಾವರದ ಕಾಂತಮಂಗಲದಲ್ಲೂ ಮರಳ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.ಕೇರಳ ಭಾಗದಿಂದ ಬರುತ್ತಿದ್ದ ಕೆಂಪು ಕಲ್ಲಿನ ಲಾರಿಯನ್ನು ಸುಳ್ಯ ವಿವೇಕಾನಂದ ಸರ್ಕಲ್ ಬಳಿ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗಡೆಯವರ ನೇತೃತ್ವದಲ್ಲಿ ವಶಪಡಿಸಿಕೊಳ್ಳಲಾಯಿತು. ಗೂನಡ್ಕದ ಪೆಲ್ತಡ್ಕ ಎಂಬಲ್ಲಿ ಪಯಸ್ವಿನಿ ನದಿಯಿಂದ ಮರಳು ಎತ್ತುತಿದ್ದ ಕಡೆಗಳಲ್ಲಿ ಸುಳ್ಯ ತಹಶೀಲ್ದಾರ್ ಖದ್ದು ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ

ಇದೀಗ ಒಟ್ಟು ಮೂರು ವಾಹನವನ್ನು ಕಂದಾಯ ನಿರೀಕ್ಷಕರ ಕಚೇರಿ ಬಳಿ ಇರಿಸಲಾಗಿದ್ದು ಮೇಲಿನ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ.

See also  ಸಂಪಾಜೆ: ಕತ್ತಲಿನಲ್ಲಿ ಬಂದವರು ಪ್ರಜ್ಞೆ ತಪ್ಪಿಸಿ ಗೋವನ್ನು ಹೊತ್ತೊಯ್ದರು..!, ಮನಕಲುಕಿದ ಸಿಸಿಟಿವಿ ದೃಶ್ಯ..! ಈ‌ ಪಾಪಕ್ಕೆ ಯಾರು ಹೊಣೆ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget