ಕರಾವಳಿರಾಜ್ಯ

ನನ್ನನ್ನು ಮೈಸೂರಿನ ತಾಯಿ ಚಾಮುಂಡಿ ಕರೆಯುತ್ತಿದ್ದಾಳೆ ಎಂದ ಇಳಯರಾಜ..! ಇಲ್ಲಿದೆ ವಿಡಿಯೋ

165

ನ್ಯೂಸ್ ನಾಟೌಟ್: ಮೈಸೂರಿನಲ್ಲಿ ಯುವ ದಸರಾ ಅದ್ದೂರಿಯಾಗಿ ನೆರವೇರುತ್ತಿದೆ. ಅಕ್ಟೋಬರ್ 9ರಂದು ಎಆರ್ ರೆಹಮಾನ್ ಅವರು ಈ ಕಾರ್ಯಕ್ರಮದಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾರೆ. ಅದೇ ರೀತಿ ಅಕ್ಟೋಬರ್ 10ರಂದು ಇಳಯರಾಜ ತಂಡ ಸಂಗೀತ ಕಾರ್ಯಕ್ರಮ ನೀಡಲಿದೆ.

ಈ ಬಗ್ಗೆ ಇಳಯರಾಜ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ. ಕನ್ನಡದಲ್ಲೇ ಮಾತನಾಡಿ ಖುಷಿ ಹೊರಹಾಕಿದ್ದಾರೆ ‘ಎಲ್ಲರಿಗೂ ನಮಸ್ಕಾರ. ಮೈಸೂರು ದಸಾರದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಚಾಮುಂಡಿ ದೇವಿ ಅನುಗ್ರಹ ಇದೆ ಎಂದು ಭಾವಿಸುತ್ತೇನೆ. ಅವಳೇ ನನ್ನ ಮೈಸೂರು ದರಸರಾಗೆ ಕರೆಯುತ್ತಿದ್ದಾಳೆ. ನನ್ನನ್ನು ಮಾತ್ರವಲ್ಲ, ನನ್ನ ತಂಡವನ್ನು ಕರೆಯುತ್ತಿದ್ದಾಳೆ. ಅವಳ ಆಶೀರ್ವಾದಿಂದ ಕಾರ್ಯಕ್ರಮ ಚೆನ್ನಾಗಿ ನಡೆಯಲಿದೆ ಎಂದು ನಾನು ಭಾವಿಸುತ್ತೇನೆ. ನಿಮ್ಮನ್ನು ನಾನು ನೋಡಬೇಕು, ನನ್ನನ್ನು ನೀವು ನೋಡಬೇಕು’ ಎಂದು ಇಳಯರಾಜ ಹೇಳಿದ್ದಾರೆ.

ಇಳಯರಾಜ ಅವರು ಸಾಕಷ್ಟು ಕಷ್ಟಪಟ್ಟು ಚಿತ್ರರಂಗದಲ್ಲಿ ನೆಲೆ ಕಂಡುಕೊಡರು. ಅವರು ಕಂಪೋಸ್ ಮಾಡಿದ ಹಾಡುಗಳಿಗೆ ಲೆಕ್ಕವೇ ಇಲ್ಲ. ಅವರ ಜೀವನ ಅನೇಕರಿಗೆ ಮಾದರಿ. ಅವರ ಮ್ಯೂಸಿಕ್ ಪ್ರೋಗ್ರಾಂ ಎಂದಾಗ ಸಹಜವಾಗಿಯೇ ಎಲ್ಲರಿಗೂ ನಿರೀಕ್ಷೆ ಮೂಡುತ್ತದೆ.

See also  ಸಂಪಾಜೆಯ ರಂಬೂಟನ್‌ ಕೃಷಿಕ ಇನ್ನಿಲ್ಲ, ಹಠಾತ್‌ ಹೃದಯಾಘಾತಕ್ಕೆ ಅಂಬೆಕಲ್ಲಿನ ಪ್ರಗತಿಪರ ಕೃಷಿಕ ಬಲಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget