ಕಾಸರಗೋಡು

ಕಾಸರಗೋಡು: ಖ್ಯಾತ ಸಾಹಿತಿ ಇಬ್ರಾಹಿಂ ಬೇವಿಂಜ ನಿಧನ

ನ್ಯೂಸ್ ನಾಟೌ ಟ್: ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಾಹಿತಿ ಮತ್ತು ಅಧ್ಯಾಪಕ ಇಬ್ರಾಹೀಂ ಬೇವಿಂಜ (69) ಗುರುವಾರ ರಾತ್ರಿ ನಿಧನರಾಗಿದ್ದಾರೆ.

ಮೂಲತಃ ಅಬ್ದುಲ್ಲಾ ಕುಂಞಿ ಮುಸ್ಲಿಯಾರ್ ಮತ್ತು ಚೆಂಬರಿಕ ಉಮ್ಮಾಲಿಮ್ಮ ದಂಪತಿಯ ಪುತ್ರ.: ಇವರು ಕಾಸರಕೋಡಿನ ಚೆರ್ಕಳ ಬೇವಿಂಜ ನೀವಾಸಿಯಾಗಿದ್ದು ಕಾಸರಗೋಡು ಸರ್ಕಾರಿ ಕಾಲೇಜಿನಿಂದ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದಲ್ಲಿ ಪದವಿ ಪಡೆದ ಇಬ್ರಾಹೀಂ ಅವರು, ಬಳಿಕ ಪಟ್ಟಾಂಬಿ ಸಂಸ್ಕೃತ ಕಾಲೇಜಿನಲ್ಲಿ ಮಲಯಾಳಂನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದರು .

ಕೋಝಿಕ್ಕೋಡ್ ವಿಶ್ವವಿದ್ಯಾಲಯದಲ್ಲಿ ಎಂಫಿಲ್ ಪೂರ್ತಿಗೊಳಿಸಿದ ಅವರು, 1980-81ರ ಅವಧಿಯಲ್ಲಿ ಚಂದ್ರಿಕಾ ದಿನಪತ್ರಿಕೆಯ ಸಹ ಸಂಪಾದಕರಾಗಿದ್ದರು. ಮಲಯಾಳಂನಲ್ಲಿ ಇಸ್ಲಾಮಿಕ್ ಸಾಹಿತ್ಯ, ಮಲಯಾಳಂನಲ್ಲಿ ಮುಸ್ಲಿಂ ಸಾಮಾಜಿಕ ಜೀವನದ ಉಬೈದ್ , ಪಿ. ಕುಂಞಿ ರಾಮನ್ ನಾಯರುಡೆ ಕತ್ತುನ್ನ ಅಂಬಲಂ, ಖುರ್ ಆನುಂ ಬಸಹೇರುಂ ಪ್ರಮುಖ ಮಲಯಾಳಂ ಕೃತಿಗಳನ್ನು ಬರೆದಿದ್ದಾರೆ.

Related posts

ಕೋಳಿ ಸಾರಿಗಾಗಿ ಜಗಳದಲ್ಲಿ ತಂದೆಯಿಂದ ಹತ್ಯೆಗೀಡಾದ ಯುವಕ ಎಂ.ಎಸ್‌. ಧೋನಿಯಂತೆ ಸಿಕ್ಸರ್ ವೀರ..! ಮುರಿದುಬಿತ್ತು ಭವಿಷ್ಯದ ಕ್ರಿಕೆಟರ್ ಆಗುವ ಕನಸಿನ ಗೋಪುರ..!

ಅಧಿವೇಶನದ ವೇಳೆ ಅಶ್ಲೀಲ ವಿಡಿಯೋ ವೀಕ್ಷಿಸಿದ ಬಿಜೆಪಿ ಶಾಸಕ? ಕಮಲ ಪಾಳಯಕ್ಕೆ ಮತ್ತೊಮ್ಮೆ ಬಹಿರಂಗ ಮುಖಭಂಗ

ಕಾಸರಗೋಡು: ಮಹಿಳಾ ಪೊಲೀಸ್ ಸಿಬ್ಬಂದಿಯ ಮೇಲೆ ತಲವಾರಿನಿಂದ ದಾಳಿ..! ಚಿಕಿತ್ಸೆ ಫಲಿಸದೆ ಸಾವು..!