ಕರಾವಳಿ

ಬೆಳ್ತಂಗಡಿ/ಶಿಶಿಲ: ಪತ್ನಿಯ ಕಣ್ಣನ್ನೇ ಕಚ್ಚಿ ಮಾಂಸ ಹೊರಬರುವಂತೆ ಗಾಯಗೊಳಿಸಿದ ಪಾಪಿ ಪತಿ..! ಮಗಳಿಗೂ ಗಾಯ,ಏನಿದು ಘಟನೆ?

142

ನ್ಯೂಸ್ ನಾಟೌಟ್ : ಇತ್ತೀಚಿನ ಕೆಲವು ಘಟನೆಗಳನ್ನು ನೋಡಿದಾಗ ಗುಣದಲ್ಲಿ ಮನುಷ್ಯನಿಗಿಂತ ಪ್ರಾಣಿಗಳೇ ಮೆಲು ಅನ್ಸುತ್ತೆ.ಒಂದು ಹೊತ್ತಿನ ಊಟ ಹಾಕಿದ್ರೆ ಪ್ರಾಣಿಗಳು ತೋರುವ ಪ್ರೀತಿಗೆ ಬೆಲೆ ಕಟ್ಟಲಸಾಧ್ಯ.ಹೌದು,ಇಲ್ಲೊಬ್ಬ ವ್ಯಕ್ತಿ ಕಂಠಪೂರ್ತಿ ಕುಡಿದು ತನ್ನ ಹೆಂಡತಿಯ ಕಣ್ಣನ್ನೇ ಕಚ್ಚಿ ಮಾಂಸ ಹೊರಬರುವಂತೆ ಗಾಯಗೊಳಿಸಿದ್ದಾನೆ.

ಇಂತಹ ಭಯಾನಕ ಘಟನೆ ವರದಿಯಾಗಿದ್ದು,ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಶಿಶಿಲ ಎಂಬಲ್ಲಿ.ಮೋಹಿನಿ ಎಂಬ ಮಹಿಳೆಗೆ ಆತನ ಪತಿ ಸುರೇಶ್ ಗೌಡ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ.ಸದ್ಯ ಮಹಿಳೆ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇದರೊಂದಿಗೆ ಆಕೆಯ ಮಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ.ಘಟನೆ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಈ ಮಧ್ಯೆ ಆರೋಪಿ ಸುರೇಶ್ ತಪ್ಪಿಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ನಿನ್ನೆ (ಡಿ.18) ರಾತ್ರಿ 12ಗಂಟೆ ಆಗಿರಬಹುದು. ಮನೆ ಕಡೆ ಕಂಠ ಪೂರ್ತಿ ಕುಡಿದು ತೇಲಾಡುತ್ತ ಬಂದ ಗಂಡನಿಗಾಗಿ ಹೆಂಡತಿ ಬಾಗಿಲು ತೆರೆದಿದ್ದಾರೆ.ಈ ವೇಳೆ ಮನೆಗೆ ಬಂದ ಸುರೇಶ್ ಗೌಡ, ಪತ್ನಿ ಹಾಗೂ ಮಗಳಿಗೆ ಬೈದಿದ್ದಲ್ಲದೇ ಮದ್ಯದ ಅಮಲಿನಲ್ಲಿ ಪತ್ನಿ ಜೊತೆ ಜಗಳವಾಡಿ ಆಕೆಯ ಕಣ್ಣು ಕಚ್ಚಿದ್ದಾನೆ.ನಂತರ ಮುಖದ ಎಡಭಾಗದ ಮಾಂಸ ಕಚ್ಚಿ ತೆಗೆದಿದ್ದಾನೆ. ಪತ್ನಿ ಕಣ್ಣು ಮತ್ತು ಮುಖದ ಎಡಭಾಗಕ್ಕೆ ಗಂಭೀರ ಗಾಯಗಳಾಗಿವೆ. ಮತ್ತೊಂದೆಡೆ ಮಗಳ ಮೇಲೂ ಗಾಯಗಳಾಗಿವೆ. ಸದ್ಯ ತಾಯಿ-ಮಗಳನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸುರೇಶ್ ಗೌಡ(55) ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಕೋಟೆಬಾಗಿಲಿನ ಮೋಹಿನಿ(55)ಯವರನ್ನು ಕಳೆದ 22 ವರ್ಷದ ಹಿಂದೆ ಮದುವೆಯಾಗಿದ್ದ. ಶಿಶಿಲದಲ್ಲಿ ಮೋಹಿನಿ ತಂದೆಯವರು ಕೊಟ್ಟ ಜಾಗದಲ್ಲಿಯೇ ಸುರೇಶ್ ಗೌಡ ವಾಸವಾಗಿದ್ದ. ಸುರೇಶ್ ಕೂಲಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

See also  ಸುಳ್ಯ:NMPUC 2024-25 ನೇ ಸಾಲಿನ ಪ್ರಥಮ ಪಿ.ಯು.ಸಿ ಗೆ ದಾಖಲಾತಿ ಆರಂಭ; SSLCಯಲ್ಲಿ ಉತ್ತಮ ಮಾರ್ಕ್ಸ್‌ ಪಡೆದವರಿಗೆ ಸಿಗಲಿದೆ ವಿಶೇಷ ಪ್ರಯೋಜನಗಳು..
  Ad Widget   Ad Widget     Ad Widget   Ad Widget   Ad Widget   Ad Widget