ನ್ಯೂಸ್ ನಾಟೌಟ್: ಹಣ, ಆಸ್ತಿ-ಅಂತಸ್ತಿನ ನಡುವೆ ಸಂಬಂಧಕ್ಕೆ ಮತ್ತು ಒಳ್ಳೆಯತನಕ್ಕೆ ಮಹತ್ವವೇ ಇಲ್ಲದಂತಾಗಿದೆ. ಇಲ್ಲೊಂದು ಆನೆ ಮಾನವೀಯತೆ, ಒಳ್ಳೆಯತನದ ಪಾಠವನ್ನು ಕಲಿಸಿದೆ. ಕೊಳದಲ್ಲಿ ಬಿದ್ದ ಚಿಂಕಾರವನ್ನು ರಕ್ಷಿಸುವ ಮೂಲಕ ಆನೆಯೊಂದು ಒಳ್ಳೆಯತನ ಏನೆಂಬುದನ್ನು ತೋರಿಸಿಕೊಟ್ಟಿದೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಗಜರಾಜನ ದೊಡ್ಡ ಗುಣಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.
ಆನೆಯೊಂದು ಕೊಳದಲ್ಲಿ ಬಿದ್ದು, ಪ್ರಾಣ ರಕ್ಷಣೆಗಾಗಿ ಒದ್ದಾಡುತ್ತಿದ್ದ ಚಿಂಕಾರವನ್ನು (ಜಿಂಕೆ ಜಾತಿಗೆ ಸೇರಿದ ಪ್ರಾಣಿ) ರಕ್ಷಿಸುವ ಮೂಲಕ ನಮಗೆಲ್ಲರಿಗೂ ಮಾನವೀಯತೆ ಮತ್ತು ಒಳ್ಳೆಯತನದ ಪಾಠವನ್ನು ಮಾಡಿದೆ.
View this post on Instagram
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಚಿಂಕಾರವೊಂದು ಕೊಳದಲ್ಲಿ ಬಿದ್ದು ಒದ್ದಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಇದನ್ನು ಕಂಡಂತಹ ಗಜರಾಜ ಅಲ್ಲಿಗೆ ಹೋಗಿ, ತನ್ನ ಸೊಂಡಿಲಿನ ಸಹಾಯದಿಂದ ಕೊಳದಲ್ಲಿ ಬಿದ್ದ ಚಿಂಕಾರವನ್ನು ಮೇಲೆತ್ತುವ ಮೂಲಕ ಮುಗ್ಧ ಜೀವವನ್ನು ರಕ್ಷಣೆ ಮಾಡಿದೆ.
ಭಾರತ-ಪಾಕ್ ಕದನ ವಿರಾಮ ಡೊನಾಲ್ಡ್ ಟ್ರಂಪ್ ನಿಂದ ಆದದ್ದು ಎಂದ ರಷ್ಯಾ..! ಟ್ರಂಪ್ ಹೇಳಿಕೆಗೆ ರಷ್ಯಾದಿಂದ ಅನುಮೋದನೆ..!