ಕ್ರೀಡೆ/ಸಿನಿಮಾಕ್ರೈಂ

ಭೀಕರ ರಸ್ತೆ ಅಪಘಾತ: ಮಾನವೀಯತೆ ಮೆರೆದ ಕಿಚ್ಚ! ವಿಡಿಯೋ ವೈರಲ್

238

ನ್ಯೂಸ್‌ನಾಟೌಟ್‌: ರಸ್ತೆಯಲ್ಲಿ ಭೀಕರ ಅಪಘಾತಕ್ಕೊಳಗಾಗಿ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ವ್ಯಕ್ತಿಯನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಉಪಚರಿಸಿ, ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಆಕ್ಸಿಡೆಂಟ್ ಜಾಗದಲ್ಲಿ ಮನುಷ್ಯತ್ವ ಗೊತ್ತಿಲ್ಲದ ಜನಕ್ಕೆ ಉಗಿದು ಬುದ್ಧಿ ಹೇಳಿದ ಅಭಿನಯ ಚಕ್ರವರ್ತಿ ಎಂಬ ಶೀರ್ಷಿಕೆಯೊಂದಿಗೆ ರಾಜು ಎಂಬವರು ವೈರಲ್ ವಿಡಿಯೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

https://www.facebook.com/reel/3008084429496787

ಅಪರಿಚಿತ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಭೀಕರ ಅಪಘಾತಕ್ಕೆ ಒಳಗಾಗಿ ಕರುಳು ಹೊರ ಬಂದು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೂ ಯಾರೊಬ್ಬರೂ ಹತ್ತಿರ ಬಂದು ಸಹಾಯ ಮಾಡಲಿಲ್ಲ. ಈ ಹೊತ್ತಿನಲ್ಲಿ ನಟ ಕಿಚ್ಚ ಸುದೀಪ ತಮ್ಮ ಕೈಗಳಲ್ಲೇ ಆತನನ್ನು ಹಿಡಿದು ಆಂಬ್ಯುಲೆನ್ಸ್ ಗೆ ವ್ಯವಸ್ಥೆ ಮಾಡಿದ್ದಾರೆ. ಆ ನಂತರ ಸುತ್ತ ನಿಂತಿದ್ದ ಜನರಿಗೆ ಬೈದು ಬುದ್ಧಿ ಹೇಳಿರುವ ದೃಶ್ಯ ಎಲ್ಲೆಡೆ ವೈರಲ್ ಆಗುತ್ತದೆ.

See also  ಪ್ರಜ್ವಲ್ ರೇವಣ್ಣ ವಿರುದ್ಧ 'ಬ್ಲೂ ಕಾರ್ನರ್ ' ನೋಟಿಸ್ ಜಾರಿ..! ಪ್ರಜ್ವಲ್ ಎಲ್ಲೇ ಕಾಣಿಸಿಕೊಂಡರೂ ಮಾಹಿತಿ ನೀಡಲು 196 ರಾಷ್ಟ್ರಗಳಿಗೆ ಸೂಚನೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget