ಕರಾವಳಿಬೆಂಗಳೂರುರಾಜಕೀಯ

ರೈತರಿಗೆ ನೀರುಣಿಸುವುದರಲ್ಲಿ ಕಾರ್ಕಳ ಇಡೀ ರಾಜ್ಯದಲ್ಲೇ ವಿಭಿನ್ನ ಹೇಗೆ? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್ ..?

242

ನ್ಯೂಸ್ ನಾಟೌಟ್ : ಇಡೀ ರಾಜ್ಯದಲ್ಲಿ ಕಾರ್ಕಳ ತಾಲೂಕು ಹೆಚ್ಚು ಗಮನ ಸೆಳೆಯುತ್ತದೆ. ಪ್ರವಾಸಿಗರಂತೂ ಕಾರ್ಕಳವನ್ನು ಎಂದಿಗೂ ಮರೆಯುವುದೇ ಇಲ್ಲ. ಇಲ್ಲಿನ ಗೊಮ್ಮಟೇಶ್ವರನ ವಿಗ್ರಹ ಎಂಥಹವರನ್ನೂ ಆಕರ್ಷಿಸುತ್ತಿದೆ. ಉಡುಪಿ ಜಿಲ್ಲೆಯ ಹಸಿರ ತಾಣದ ಸುಂದರ ಸೊಬಗಿನಲ್ಲಿ ಬಿಜೆಪಿ ನಾಯಕ ಸುನಿಲ್ ಕುಮಾರ್ ಆಡಳಿತದಲ್ಲಿ ಕಾರ್ಕಳ ತಾಲೂಕಿನ ಅಭಿವೃದ್ಧಿ ಇಡೀ ರಾಜ್ಯಕ್ಕೆ ಮಾದರಿಯಾಗುವಂತಹದ್ದು ಅನ್ನುವುದು ವಿಶೇಷ.

ಪ್ರತಿಯೊಬ್ಬ ಮನುಷ್ಯನಿಗೂ ನೀರು ಬೇಕೇ ಬೇಕು. ಕೃಷಿ ಚಟುವಟಿಕೆಗಳಿಗೆ ನೀರು ಎಷ್ಟು ಮುಖ್ಯ ಅನ್ನುವುದು ನಮಗೆಲ್ಲ ತಿಳಿದ ವಿಚಾರ. ಅಂತಹ ಕೃಷಿ ಚಟುವಟಿಕೆಗಳಿಗೆ ನೀರುಣಿಸಲು ಕಾರ್ಕಳದಲ್ಲಿ ಹಲವು ವಿಭಿನ್ನ ಪ್ರಯತ್ನಗಳನ್ನು ಮಾಡಲಾಗಿದೆ. ಮಾತ್ರವಲ್ಲ ಅಂತರ್ಜಲ ವೃದ್ಧಿ ಕಿಂಡಿ ಅಣೆಕಟ್ಟುಗಳ ನಿರ್ಮಾಣ ಇಲ್ಲಿ ಹೆಚ್ಚಾಗಿ ಗಮನ ಸೆಳೆಯುತ್ತಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 236ಕ್ಕೂ ಹೆಚ್ಚು ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಸೇತುವೆ ಸಹಿತ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದ್ದು ರೈತರ ಕೃಷಿ ಯಂತ್ರಗಳ ಸಾಗಾಟಕ್ಕೆ ಸಹಕಾರಿಯಾಗಿದೆ. ಅಪಾರ ಪ್ರಮಾಣದಲ್ಲಿ ಜಲ ಮರು ಪೂರಣ, ಭೂಮಿಯಲ್ಲಿ ಅಂತರ್ಜಲ ವೃದ್ಧಿಯನ್ನು ಮಾಡಲಾಗಿದೆ. ವಿದ್ಯಾರ್ಥಿಗಳ ಜನರ ಓಡಾಟಕ್ಕೆ ಅನುಕೂಲವಾಗಿದೆ. ಅಲ್ಲದೆ ಹಡಿಲು ಭೂಮಿಗೆ ಉಳುವ ಯಂತ್ರಗಳನ್ನು ಕೊಂಡೊಯ್ಯುವ ಅವಕಾಶ ನೀಡಲಾಗಿದೆ, ಇದರಿಂದ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ಸಿಕ್ಕಿದಂತಾಗಿದೆ.

https://www.youtube.com/watch?v=RoNnlp7cM10
See also  ಕರಾವಳಿಯಲ್ಲಿ ಚಾಕೊಲೆಟ್‌ ರೂಪದಲ್ಲಿ ಮಾದಕ ದ್ರವ್ಯ ಮಾರಾಟ..!, 100 ಕೆಜಿ ಮಾದಕ ದ್ರವ್ಯ ವಶ, ಇಬ್ಬರ ಬಂಧನ
  Ad Widget   Ad Widget   Ad Widget   Ad Widget   Ad Widget   Ad Widget   Ad Widget