ಕ್ರೈಂವೈರಲ್ ನ್ಯೂಸ್

ಕಾಲುವೆಗೆ ಬಿದ್ದ ಕುದುರೆಯನ್ನು ಪ್ರಾಣದ ಹಂಗು ತೊರೆದು ರಕ್ಷಿಸಿದ ಈ ಯುವಕ ಯಾರು? ಡ್ಯಾಂ ಎಡದಂಡೆ ಕಾಲುವೆಗೆ ಬಿದ್ದ ಕುದುರೆ ಬದುಕಿದ್ದೇ ರೋಚಕ!

178

ನ್ಯೂಸ್‌ ನಾಟೌಟ್‌: ತುಂಬಿ ಹರಿಯುತ್ತಿದ್ದ ಕಾಲುವೆಗೆ ಬಿದ್ದ ಕುದುರೆಯನ್ನು ಯುವಕ ಪ್ರಾಣದ ಹಂಗು ತೊರೆದು ರಕ್ಷಿಸಿದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗ್ನಿ ಗ್ರಾಮದಲ್ಲಿ ನಡೆದಿದೆ.

ಅಗತೀರ್ಥ ಗ್ರಾಮದ ಯುವಕ ಮೌನೇಶ ಕುದುರೆ ರಕ್ಷಿಸಿದ ಯುವಕ ಎಂದು ಗುರುತಿಸಲಾಗಿದ್ದು, ಯುವಕ ಮೌನೇಶ್ ಕುದುರೆ ಕಾಲುವೆಗೆ ಬಿದ್ದಿದ್ದನ್ನು ಗಮನಿಸಿದ ಕೂಡಲೇ ಪ್ರಾಣದ ಹಂಗು ತೊರೆದು ಕಾಲುವೆಗಿಳಿದಿದ್ದಾನೆ. ತುಂಬಿ ಹರಿಯುತ್ತಿದ್ದ ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಕುದುರೆಯನ್ನು ಸುರಕ್ಷಿತವಾಗಿ ದಡ ಸೇರಿಸಿದ್ದಾನೆ ಎನ್ನಲಾಗಿದೆ.

ಅಗ್ನಿ ಗ್ರಾಮದ ಹೊರವಲಯದ ನಾರಾಯಣಪುರ ಡ್ಯಾಂ ಎಡದಂಡೆ ಕಾಲುವೆಗೆ ಕುದುರೆ ಬಿದ್ದಿತ್ತು. ಪ್ರಾಣದ ಹಂಗು ತೊರೆದು ಕುದುರೆ ರಕ್ಷಣೆ ಮಾಡಿದ ಯುವಕನ ಕಾರ್ಯಕ್ಕೆ ಗ್ರಾಮಸ್ಥರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.

See also  ಮಂಗಳೂರು: ಹಾಡಹಗಲೇ ಬಂದೂಕಿನಿಂದ ಸಿಬ್ಬಂದಿಯನ್ನು ಬೆದರಿಸಿ ಬ್ಯಾಂಕ್ ದರೋಡೆ..! ಹಣ ಮತ್ತು ಚಿನ್ನಾಭರಣಗಳೊಂದಿಗೆ ಕಾರಿನಲ್ಲಿ ಪರಾರಿ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget