ಕರಾವಳಿಪುತ್ತೂರುಭಕ್ತಿಭಾವ

ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೆಗೆ ಹರಿದು ಬಂದ ಹೊರೆಕಾಣಿಕೆ

ನ್ಯೂಸ್‌ನಾಟೌಟ್‌: ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಳದ ವರ್ಷಾವಧಿ ಜಾತ್ರೋತ್ಸವ ಏ.10ರಿಂದ 20ರವರೆಗೆ ಕ್ಷೇತ್ರದ ತಂತ್ರಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿವೆ.

ಈ ಪ್ರಯುಕ್ತ ಶನಿವಾರ ಸಾಯಂಕಾಲ ದರ್ಬೆ ವೃತ್ತ ಹಾಗೂ ಬೊಳುವಾರು ಸುಬ್ರಹ್ಮಣ್ಯ ನಗರದಿಂದ ಹಸಿರುವಾಣಿ ಮೆರವಣಿಗೆ ದೇವಳಕ್ಕೆ ವಿವಿಧ ವಾಹನಗಳೊಂದಿಗೆ ಸಾಗಿ ಬಂತು. ಮೆರವಣಿಗೆಯಲ್ಲಿ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಮಹಿಳೆಯರು ಪೂರ್ಣಕುಂಭ ಸ್ವಾಗತದೊಂದಿಗೆ ಕಾಲ್ನಡಿಗೆಯೊಂದಿಗೆ ಕಲಶ ಹಿಡಿದುಕೊಂಡು ಹೊರೆಕಾಣಿಕೆಗೆ ಮೆರವಣಿಗೆಯೊಂದಿಗೆ ಸಾಗಿಬಂದರು. ಮೆರವಣಿಗೆಗೆ ಚೆಂಡೆ, ಕುಣಿತ ಭಜನೆ, ಪೂರ್ಣಕುಂಬ ಸ್ವಾಗತ ಮೆರುಗು ತುಂಬಿದವು. ಧಾರ್ಮಿಕ ಶಿಕ್ಷಣ ಪಡೆಯುವ 15 ಕೇಂದ್ರಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು, ಎರಡು ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

Related posts

ಕಾರ್ಕಳ:ಕುಟುಂಬ ಸಮೇತ ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ವಿ. ಸುನೀಲ್ ಕುಮಾರ್

ಸುಬ್ರಹ್ಮಣ್ಯ:ಮನೆಯಲ್ಲಿ ಯಾರೂ ಇಲ್ಲದ ವೇಳೆ ದುರಂತ,ಅಟೋ ಚಾಲಕ ನೇಣು ಬಿಗಿದು ಆತ್ಮಹತ್ಯೆ

ಮಂಗಳೂರು: ಜೈಲಿನಲ್ಲಿ ವಿಚಾರಣಾಧೀನ ಕೈದಿಗಳ ಮೇಲೆ ರೌಡಿಗಳಿಂದ ದಾಳಿ..! ಇಬ್ಬರು ವೆನ್ಲಾಕ್ ಆಸ್ಪತ್ರೆಗೆ ದಾಖಲು..!