ಕರಾವಳಿಕಾಸರಗೋಡು

ಕರಾವಳಿಯಲ್ಲಿ ಇಬ್ಬರನ್ನು ಬಲಿ ಪಡೆದ ಧಾರಾಕಾರ ಮಳೆ!, ಹಲವೆಡೆ ಅಪಾರ ಹಾನಿ, ಮರಬಿದ್ದು ವಿದ್ಯಾರ್ಥಿನಿ ಸಾವು

193

ನ್ಯೂಸ್‌ ನಾಟೌಟ್‌: ಸೋಮವಾರದಿಂದ (ಜು.3) ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಧಾರಾಕಾರ ಮಳೆಗೆ ಹಲವು ಪ್ರದೇಶಗಳಲ್ಲಿ ಹಾನಿಯಾಗಿದೆ. ಉಡುಪಿ ಜಿಲ್ಲೆಯ ಶಿರ್ವದ ಬಳಿ ಆವರಣಗೋಡೆ ಇಲ್ಲದ ಬಾವಿಯ ಮಣ್ಣು ಕುಸಿದು ಬಾವಿಗೆ ಬಿದ್ದು ಗುಲಾಬಿ( 43) ಎಂಬವರು ಮೃತಪಟ್ಟಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲೂ ವರುಣನ ಅಬ್ಬರ ಜೋರಾಗಿದೆ. ಇಲ್ಲಿನ ಕುಂಬಳೆ ಸಮೀಪದ ಅಂಗಡಿಮೊಗರಿನಲ್ಲಿ ಗಾಳಿ ಮಳೆಯಿಂದ ಮರ ಉರುಳಿ ಬಿದ್ದು ವಿದ್ಯಾರ್ಥಿನಿ ಆಯಿಷತ್‌ ಮಿನ್ಹಾ (11) ಎಂಬ ಬಾಲಕಿ ಮೃತಪಟ್ಟಿದ್ದಾಳೆ.

See also  ದೊಡ್ಡಡ್ಕ : ಮತದಾನಕ್ಕೆ ಬರುತ್ತಿದ್ದ ವ್ಯಕ್ತಿಯ ಬೈಕ್ ಗೆ ಕಾರು ಡಿಕ್ಕಿ..! ಅರಂತೋಡಿನ ಯುವಕನ ಸಾವು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget