ಕ್ರೈಂವೈರಲ್ ನ್ಯೂಸ್

ಗುಂಡನಿಗಾಗಿ ಪ್ರೀತಿಸಿ ಮದುವೆಯಾಗಿದ್ದ ಗಂಡನನ್ನೇ ಕೊಂದಳು..! ಆತನನ್ನು ಮುಗಿಸಲು ಸುಪಾರಿ ಕೊಟ್ಟು ಅಪಘಾತದ ಕಥೆ ಕಟ್ಟಿದ ಹರ್ಷಿತಾ..!

164

ನ್ಯೂಸ್‌ ನಾಟೌಟ್‌: ಮಾಜಿ ಪ್ರಿಯಕರನಿಗಾಗಿ ಪ್ರೀತಿಸಿ ಮದುವೆಯಾಗಿದ್ದ ಗಂಡನನ್ನೇ ಪತ್ನಿ ಕೊಲೆ ಮಾಡಿಸಿದ ಘಟನೆ ತುಮಕೂರಿನ ಕೊರಟಗೆರೆ ತಾಲೂಕಿನ ಮಲ್ಲೆಕಾವು ಗ್ರಾಮದಲ್ಲಿ ಇಂದು(ಜು.30) ನಡೆದಿದೆ. ಪ್ರಕಾಶ್ (30) ಮೃತ ಎಂದು ಗುರುತಿಸಲಾಗಿದೆ. ಹರ್ಷಿತಾ (28) ಗಂಡನನ್ನೇ ಕೊಲೆ ಮಾಡಿದಾಕೆ.

ಕಲಬುರ್ಗಿ ಜಿಲ್ಲೆಯ ಚಿಂಚುಲಿ ಮೂಲದವನಾಗಿರೋ ಪ್ರಕಾಶ್ 3 ವರ್ಷದ ಹಿಂದೆ ಹರ್ಷಿತಾಗೆ ಇನ್ ಸ್ಟಾಗ್ರಾಂ ನಲ್ಲಿ ಪರಿಚಯವಾಗಿತ್ತು. ಬಳಿಕ ಪರಸ್ಪರ ಪ್ರೀತಿಸಿ ಇಬ್ಬರೂ ಮದುವೆಯಾಗಿದ್ದರು. ಮದುವೆಯ ಬಳಿಕ ಪತ್ನಿಯ ತವರಿನಲ್ಲೇ ವಾಸವಿದ್ದ ಪ್ರಕಾಶ್. ದಂಪತಿಗೆ ಒಂದೂವರೆ ವರ್ಷದ ಮಗುವೂ ಇತ್ತು. ಆದ್ರೆ ಇತ್ತೀಚಿಗೆ ಹರ್ಷಿತಾಳಿಗೆ ಇನ್ ಸ್ಟಾಗ್ರಾಂನಲ್ಲಿ ಮಾಜಿ ಪ್ರಿಯತಮ ಸಿಕ್ಕಿದ್ದನು. ಈ ವೇಳೆ ಹರ್ಷಿತಾ ಮತ್ತು ಮಾಜಿ ಪ್ರಿಯಕರ ‘ಗುಂಡ’ ಎಂಬಾತನಿಗೆ ಮರು ಪ್ರೇಮಾಂಕುರವಾಗಿದೆ. ಕಳೆದ 2 ತಿಂಗಳ ಹಿಂದೆ ಹರ್ಷಿತಾ ಮನೆಬಿಟ್ಟು ಗುಂಡನ ಜೊತೆ ಪರಾರಿಯಾಗಿದ್ದಳು.

ಈ ಸಂಬಂಧ ಪ್ರಕಾಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದನು. ಬಳಿಕ ಹರ್ಷಿತಾ ಮನೆಗೆ ವಾಪಾಸ್ಸಾಗಿದ್ದಳು. ಆದ್ರೆ ಒಳಗೊಳಗೇ ಗಂಡನ ಕೊಲೆಗೆ ಸ್ಕೆಚ್ ಹಾಕಿದ್ದಳು ಎನ್ನಲಾಗಿದೆ. ಗಂಡನ ಕೊಲೆಗಾಗಿ ಹರ್ಷಿತಾ ಸಹೋದರ ಸೋಮಶೇಖರ್ ಹಾಗೂ ಪ್ರಿಯತಮ ಗುಂಡನಿಗೆ ಸುಪಾರಿ ನೀಡಿದ್ದಳು. ಇದರಂತೆ ಸೋಮಶೇಖರ್ ನಂಬಿಸಿ ಪ್ರಕಾಶ್ ನನ್ನ ಕರೆಸಿಕೊಂಡಿದ್ದನು. ಸೋಮಶೇಖರ್ ಜೊತೆಗೆ ಪ್ರಕಾಶ್ ಗಾಗಿ ಗುಂಡ ಮತ್ತು ಆತನ ಸ್ನೇಹಿತ ರಂಗಸ್ವಾಮಯ್ಯ ಕಾದುಕುಳಿತಿದ್ದರು. ಪ್ರಕಾಶ್ ಬರುತ್ತಿದ್ದಂತೆ ಆತನ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು. ಡ್ರ್ಯಾಗರ್ ನಿಂದ ಎದೆಭಾಗಕ್ಕೆ ಚುಚ್ಚಿ ಪಾಪಿಗಳು ಕೊಲೆ ಮಾಡಿದ್ದಾರೆ. ಬಳಿಕ ಅಪಘಾತದ ರೀತಿಯಲ್ಲಿ ಬಿಂಬಿಸಲು ಆರೋಪಿಗಳು ಹೊರಟಿದ್ದರು. ಆದ್ರೆ ಎದೆಭಾಗಕ್ಕೆ ಚುಚ್ಚಿದ ಗಾಯ ಪತ್ತೆ ಹಿನ್ನೆಲೆಯಲ್ಲಿ ಇದು ಕೊಲೆ ಎಂದು ಖಚಿತವಾಗಿದೆ.ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Click

https://newsnotout.com/2024/07/bhagamandala-kodagu-temple-kannada-news/
https://newsnotout.com/2024/07/wayanad-kerala-narendra-modi-kannada-news-landslide-video/
https://newsnotout.com/2024/07/charmadi-kannada-news-landslide-kannada-news-rain-dakshina-kannada/
See also  ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ: ಹೈಕೋರ್ಟ್ ನಿಂದ ಸ್ವಯಂಪ್ರೇರಿತ ಪಿಐಎಲ್ ದಾಖಲು..! ಇಂದು(ಜೂ.5) ಮದ್ಯಾಹ್ನ 2:30ಕ್ಕೆ ವಿಚಾರಣೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget