ಕರಾವಳಿಕ್ರೈಂಬೆಂಗಳೂರುರಾಜಕೀಯ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸೇರಿದಂತೆ 65 ಮಂದಿಗೆ ಸಮನ್ಸ್ ಜಾರಿ, ಅಷ್ಟಕ್ಕೂ ನ್ಯಾಯಾಲಯ ಈ ಸಮನ್ಸ್ ನೀಡಿದ್ದೇಕೆ..?

ನ್ಯೂಸ್ ನಾಟೌಟ್: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಹಿತ ಒಟ್ಟು 65 ಮಂದಿಗೆ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಸ್ಫೋಟಕ ಕಾಯ್ದೆಯಡಿ ಬಂಧಿತರಾಗಿದ್ದ ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ಪರ ಹರೀಶ್ ಪೂಂಜಾ ಮತ್ತು ತಂಡ ಪ್ರತಿಭಟನೆ ನಡೆಸಿತ್ತು.

ಈ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಸಿರುವ ಎರಡು ಪ್ರತ್ಯೇಕ ಕೇಸ್ ಹರೀಶ್ ಪೂಂಜಾ ಮತ್ತಿತರರ ವಿರುದ್ಧ ದಾಖಲಾಗಿತ್ತು. ಪ್ರಥಮ ಕೇಸ್‌ನಲ್ಲಿ 28 ಮಂದಿ ಮತ್ತು 2ನೇ ಕೇಸ್‌ನಲ್ಲಿ 37 ಮಂದಿಗೆ ಸಮನ್ಸ್ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಜುಲೈ 10ರಂದು ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ನ ನ್ಯಾಯಾಧೀಶರ ಎದುರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

Click 👇

https://newsnotout.com/2024/06/lk-advani-doctors-kannada-news-health-issue-wednesday
https://newsnotout.com/2024/06/kodagu-bhagamandala-madikeri-kannada-news-triveni

Related posts

ಏಕಾಏಕಿ ಕುಸಿದು ಬಿದ್ದ 100 ವರ್ಷಗಳ ಹಳೆಯ ಕಟ್ಟಡದಿಂದ ಓಡಿ ಪಾರಾದ ತಾಯಿ, ಮಗು..! ಇಲ್ಲಿದೆ ವೈರಲ್ ವಿಡಿಯೋ

ಅರಂಬೂರು: ರಿಕ್ಷಾ, ಬೈಕ್ ಗೆ ಡಿಕ್ಕಿ ಹೊಡೆದು ಕಾರು ಚಾಲಕ ಪರಾರಿ

ಸುಳ್ಯ: ನಿಯಂತ್ರಣ ತಪ್ಪಿ ಕಾರು ಪಲ್ಟಿ, ಏಣಾವರದಲ್ಲಿ ನಡೆದ ದುರ್ಘಟನೆ..!