ಕೊಡಗುಕ್ರೈಂವೈರಲ್ ನ್ಯೂಸ್

ಮಡಿಕೇರಿ: ಈಜಲು ಹಾರಂಗಿ ಹಿನ್ನೀರಿನಲ್ಲಿ ಇಳಿದವನ ಕಾಲಿಗೆ ಸಿಲುಕಿಕೊಂಡಿತು ಮೀನಿನ ಬಲೆ..! ಬಲೆಗೆ ಬಿದ್ದ ಮೀನಿನಂತೆ ವಿಲವಿಲ ಒದ್ದಾಡಿ ಪ್ರಾಣಬಿಟ್ಟ..!

169

ನ್ಯೂಸ್ ನಾಟೌಟ್: ಈಗೀಗ ಭಾರಿ ಸೆಕೆ. ಈ ಹಿನ್ನೆಲೆಯಲ್ಲಿ ಯುವಕನೊಬ್ಬ ಸ್ನಾನಕ್ಕೆಂದು ನೀರಿಗೆ ಇಳಿದಿದ್ದಾನೆ. ನೀರಿಗೆ ಇಳಿದವನೆ ಹಾಯಾಗಿ ಈಜಾಡಲು ಶುರು ಮಾಡಿದ್ದಾನೆ. ಆದರೆ ವಿಧಿಯಾಟ ಬೇರೆಯೇ ಇತ್ತು ನೋಡಿ.

ಆತ ಮೀನು ಹಿಡಿಯಲು ಹಾಕಿದ ಬಲೆಯೊಳಗೆ ಸಿಲುಕಿ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ. ಈ ದುರ್ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹೆರೂರು ಬಳಿ‌ ಇರುವ ಹಾರಂಗಿ ಹಿನ್ನೀರಿನಲ್ಲಿ ನಡೆದಿದೆ. ಮೃತಪಟ್ಟವನನ್ನು ಬಾಲು(40 ವರ್ಷ) ಎಂದು ಗುರುತಿಸಲಾಗಿದೆ. ಬಿಸಿಲ ಬೇಗೆಯ ಹಿನ್ನಲೆ ಈಜಲು ತೆರಳಿದಾಗ ಈ ದುರ್ಘಟನೆ ನಡೆದಿದೆ. ಇದೀಗ ಸ್ಥಳೀಯರು ಮೃತದೇಹವನ್ನು ಹೊರತೆಗೆದಿದ್ದಾರೆ. ಈ ಕುರಿತು ಶುಂಠಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಮತ್ತೆ ಚರ್ಚೆಯಲ್ಲಿ ನಟಿ ಪವಿತ್ರಾ ಲೋಕೇಶ್-ನರೇಶ್‌ ಜೋಡಿ, ಅಷ್ಟಕ್ಕೂ ಮೂರನೇ ಪತ್ನಿ ಕೊಟ್ಟ ಕಿರಿಕ್ ಏನು?
  Ad Widget   Ad Widget   Ad Widget   Ad Widget   Ad Widget   Ad Widget   Ad Widget