ಬೆಂಗಳೂರು: ಹಾನಗಲ್ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ವಿ ಮಾನೆ ಯವರ ಪರವಾಗಿ ಕೆಪಿಸಿಸಿಯ ವೀಕ್ಷಕರಾದ ಟಿ ಎಂ ಶಹೀದ್ ತೆಕ್ಕಿಲ್ ರವರು ಹಾನಗಲ್ ಸಾಂವಸಗಿ ಮತ್ತು ಕಾಡಶೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ ಮನೆಗೆ ತೆರಳಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಸಾಂವಸಗಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಝೀರ್ ಅಹ್ಮದ್ ಅಕ್ಬರ್ ಖಾನ್ ಮುಲ್ಲಾ, ಕೆಪಿಸಿಸಿ ಕೊರ್ಡಿನೇಟರ್ ಮಂಜುನಾಥ್ ತುಪ್ಪಾರ್ ಉಪಸ್ಥಿತರಿದ್ದರು.