ಕರಾವಳಿಕೊಡಗುಪುತ್ತೂರುರಾಜಕೀಯವೈರಲ್ ನ್ಯೂಸ್ಸುಳ್ಯ

ಗೋಕರ್ಣದಲ್ಲಿ ಕುಮಾರಸ್ವಾಮಿಗೆ ಬಿಸಿಮುಟ್ಟಿಸಿದ ಅರ್ಚಕರು !

ಬ್ರಾಹ್ಮಣ ಸಿಎಂ ವಿವಾದ ಸ್ಪಷ್ಟೀಕರಣಕ್ಕೆ ಬಿಗಿಪಟ್ಟು

ನ್ಯೂಸ್‌ನಾಟೌಟ್‌: ಮಾಜಿ ಸಿಎಂ ಕುಮಾರಸ್ವಾಮಿ ಆಡಿದ ಬ್ರಾಹ್ಮಣ ಸಿಎಂ ವಿವಾದ ತಣ್ಣಗಾಗುವಂತೆ ಕಾಣುತ್ತಿಲ್ಲ. ಬುಧವಾರ ಗೋಕರ್ಣಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಅವರಿಗೆ ಅರ್ಚಕರು ನೇರವಾಗಿ ಪ್ರಶ್ನಿಸಿ ನಿಮ್ಮ ಹೇಳಿಕೆಯಿಂದ ನಮ್ಮಸಮುದಾಯಕ್ಕೆ ಬೇಸರವಾಗಿದೆ. ಈ ಬಗ್ಗೆ ಗೋಕರ್ಣದಲ್ಲೇ ಸ್ಪಷ್ಟೀಕರಣ ನೀಡುವಂತೆ ಪಟ್ಟು ಹಿಡಿದರು.

ಇಲ್ಲಿನ ದೇವಳದ ರಥಬೀದಿಯಲ್ಲೇ ನರಸಿಂಹ ಉಪಾಧ್ಯಾಯ ಎಂಬ ಅರ್ಚಕರು ಕುಮಾರಸ್ವಾಮಿಯ ಹೇಳಿಕೆಯನ್ನು ಪ್ರಸ್ತಾಪಿಸಿ ನಿಮ್ಮ ಕುಟುಂಬದ ಬಗ್ಗೆ ಗೌರವವಿದೆ, ಆದರೆ ನೀವು ಆಡಿದ ಬ್ರಾಹ್ಮಣ ವಿರೋಧಿಯಿಂದ ಹೇಳಿಕೆ ನಮ್ಮ ಸಮುದಾಯಕ್ಕೆ ಬೇಜಾರಾಗಿದೆ. ಈ ಬಗ್ಗೆ ನಮ್ಮ ಊರಲ್ಲೇ ಉತ್ತರ ಕೊಡಬೇಕು ಎಂದು ಪಟ್ಟು ಹಿಡಿದರು. ಈ ಸಂದರ್ಭ ಅರ್ಚಕರನ್ನು ಸಮಾಧಾನಿಸಲು ಯತ್ನಿಸಿದ ಕುಮಾರಸ್ವಾಮಿ, ನಾನು ಬ್ರಾಹ್ಮಣ ವಿರೋಧಿ ಹೇಳಿಕೆ ನೀಡಿಲ್ಲ. ಬ್ರಾಹ್ಮಣರಿಗೆ ಗೌರವ ಕೊಡುತ್ತೇನೆ. ರಾಮಕೃಷ್ಣಹೆಗ್ಡೆಯವರನ್ನು ಮುಖ್ಯಮಂತ್ರಿ ಮಾಡಿದ್ದು ದೇವೇಗೌಡರು. ನಾನು ಬಿಜೆಪಿಯಲ್ಲಿ ನಡೆಯುತ್ತಿರುವ ಪೇಶ್ವೆ ಬಗ್ಗೆ ಚರ್ಚಿಸಿದ್ದು ಎಂದು ಸ್ಪಷ್ಟೀಕರಣ ನೀಡಿದರು.

Related posts

ಸುಳ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಕಳವು ಪ್ರಕರಣ..!, ಅಂಗಡಿ ಮಾಲೀಕನೆದುರಲ್ಲೇ ನಗದು ಕಳವುಗೈದ ಮಂಗಳಮುಖಿ..!ವಿಡಿಯೋ ವೀಕ್ಷಿಸಿ

ಆರ್ಯಭಟ ಪ್ರಶಸ್ತಿ ವಿಜೇತ ಉದಯ್ ಧರ್ಮಸ್ಥಳ ಇನ್ನಿಲ್ಲ

ಸಂಪಾಜೆ:ಕೊಡಗು ಡಿ.ಸಿ.ಸಿ ಬ್ಯಾಂಕ್ ನಿ.ಮಡಿಕೇರಿ 22 ನೇ ನೂತನ ಶಾಖೆ ಶುಭಾರಂಭ,ಶಾಸಕ ಎ.ಎಸ್.ಪೊನ್ನಣ್ಣರಿಂದ ಉದ್ಘಾಟನೆ ;ಗಣ್ಯರು ಭಾಗಿ