ಕರಾವಳಿ

ಗುತ್ತಿಗಾರು: ಬಿರಿಯಾನಿ ಮಾರಾಟದ ಉಳಿತಾಯ ಹಣವನ್ನು ದಾನ ಕೊಟ್ಟ ವ್ಯಾಪಾರಿ..! ಹೊಸ ವರ್ಷವನ್ನು ವಿಭಿನ್ನವಾಗಿ ವೆಲ್ ಕಮ್ ಮಾಡಿದ ಅನಿಲಣ್ಣ

ನ್ಯೂಸ್ ನಾಟೌಟ್ : ಹೊಸ ವರ್ಷಕ್ಕೆ ದುಂದು ವೆಚ್ಚ ಮಾಡೋರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ವ್ಯಾಪಾರಿ ಹೊಸ ವರ್ಷಕ್ಕೂ ಒಂದು ದಿನ ಮೊದಲು ತಮ್ಮ ಬಿರಿಯಾನಿ ವ್ಯಾಪಾರದ ಉಳಿತಾಯ ಹಣವನ್ನು ಸಮಾಜದ ಬಡವರ ಪರ ಕೆಲಸಕ್ಕೆ ವಿನಿಯೋಗಿಸಿ ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಗುತ್ತಿಗಾರು ಶ್ರೀ ರಾಘವೇಂದ್ರ ಬೇಕರಿಯನ್ನು ಮುನ್ನಡೆಸಿಕೊಂಡು ಬರುತ್ತಿರುವ ಅನಿಲ್ ಸಮಾಜಮುಖಿ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡವರಾಗಿದ್ದಾರೆ. ಬೇಕರಿ ಮತ್ತು ಉಪಹಾರದ ಜೊತೆಗೆ ಜನರೊಂದಿಗೆ ಒಂದೊಳ್ಳೆಯ ಒಡನಾಟವನ್ನು ಹೊಂದಿರುವ ಅವರು ಸುಳ್ಯ ತಾಲೂಕಿನ ತಮ್ಮ ಸಮಾಜಮುಖಿ ಕಾರ್ಯಗಳಿಂದ ಗುರುತಿಸಿಕೊಂಡಿದ್ದಾರೆ. ವರ್ಷಂಪ್ರತಿ ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸುವ ಅನಿಲ್ ಅವರು ಈ ಸಲವೂ ತಮ್ಮ ಸಮಾಜಮುಖಿ ಚಿಂತನೆಗಳಿಂದ ವರ್ಷಾರಂಭವನ್ನು ಮಾಡಿದ್ದಾರೆ. ಬಿರಿಯಾನಿ ಮಾರಾಟದ ಉಳಿತಾಯಗೊಂಡ ಹಣವನ್ನು ಈ ವರ್ಷ ಅವರು ಗುತ್ತಿಗಾರಿನ ಅಮರ ತಾಲೂಕು ಚಾರಿಟೇಬಲ್ ಟ್ರಸ್ಟ್ ನ ಸೇವಾ ಯೋಜನೆಗೆ ಧನ ಸಹಾಯ ನೀಡುವ ಮೂಲಕ ಮಾದರಿಯಾಗಿದ್ದಾರೆ. ಉಳಿತಾಯ ಹಣವನ್ನು ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಸದಸ್ಯರಾದ ನಿವೃತ್ತ ಸೈನಿಕ ಮಹೇಶ್ ಕೊಪ್ಪತಡ್ಕ, ಉದಯ ಕುಮಾರ್ ಹಾಲೆಮಜಲು, ಮೋಹನ್ ಮುಕ್ಕೂರ್, ಶಶಿಕುಮಾರ್ ಕೊರತ್ಯೆಡ್ಕ, ಜಗದೀಶ್ ಕಡಬ, ಸಂತೋಷ್ ಪಂಜ ಹಾಗೂ ಬೇಕರಿ ಸಿಬ್ಬಂದಿ ಉಪಸ್ಥಿತರಿದ್ದರು.

Related posts

ಸುಳ್ಯದಲ್ಲಿ ಪ್ರೊ ಕಬಡ್ಡಿ ಮಾದರಿ ಕೂಟಕ್ಕೆ ಭಾರಿ ತಯಾರಿ..! ಪೂರ್ವ ತಯಾರಿ ವೀಕ್ಷಿಸಿದ ಶಾಸಕಿ ಭಾಗೀರಥಿ ಮುರುಳ್ಯ

ಅನಗತ್ಯ ಎಕ್ಸ್-ರೇ ಮಾಡಿಸಿಕೊಂಡರೆ ಏನಾಗುತ್ತೇ..? ಎಕ್ಸ್-ರೇ ಗೆ ಒಳಗಾಗುವ ಮುಂಚೆ ಈ ಮಾಹಿತಿ ನಿಮಗೆ ತಿಳಿದಿರಲಿ

ಸಿಎಂ ಮಾಧ್ಯಮ ಕಾರ್ಯದರ್ಶಿ ಗುರುಲಿಂಗಸ್ವಾಮಿ ಇನ್ನಿಲ್ಲ