Latest

ಪುತ್ತೂರು:ಮಕ್ಕಳಿಗೆ ವಿಶೇಷ ರೀತಿಯಲ್ಲಿ ಸ್ವಾಗತ ;ತಿಲಕ, ಆರತಿಯೊಂದಿಗೆ ವಿದ್ಯಾರ್ಥಿಗಳ ಬರಮಾಡಿಕೊಂಡ ಶಿಕ್ಷಕರು..!

883

ನ್ಯೂಸ್‌ ನಾಟೌಟ್:ರಾಜ್ಯಾದ್ಯಂತ ಶಾಲೆಗಳು ಪ್ರಾರಂಭಗೊಂಡಿವೆ.ಮಕ್ಕಳನ್ನು ಶಿಕ್ಷಕರು ಪ್ರೀತಿಯಿಂದ ಬರಮಾಡಿಕೊಂಡ ಘಟನೆಗಳು ನಡೆದಿವೆ. ಆದರೆ ಈ ಶಾಲೆ ಮಾತ್ರ ತೀರಾ ವಿಭಿನ್ನ ಎಂಬಂತೆ ಮಕ್ಕಳನ್ನು ಆತ್ಮೀಯತೆಯಿಂದ ಬರಮಾಡಿಕೊಂಡಿದೆ. ಈ ಅಪರೂಪದ ಕ್ಷಣಕ್ಕೆ ದಕ್ಷಿಣಕನ್ನಡ ಜಿಲ್ಲೆಯ ವಿವೇಕಾನಂದ ಶಾಲೆ ಸಾಕ್ಷಿಯಾಗಿದೆ.ಇಲ್ಲಿ ಮಕ್ಕಳನ್ನು ಹಿಂದೂ ಸಂಪ್ರದಾಯದಂತೆ ಬರಮಾಡಿಕೊಳ್ಳಲಾಯಿತು.

ಇಲ್ಲಿ ಶಾಲೆಯ ಶಿಸ್ತು, ನಿಯಮಗಳ ಪರಿಚಯ ಕಾರ್ಯಕ್ರಮವೂ ಆಯೋಜಿಸಲಾಯಿತು. ಸಂಸ್ಕೃತಿ- ಸಂಸ್ಕಾರಗಳಿಗೆ ಹೆಚ್ಚಿನ ಒತ್ತು ನೀಡಲಾಗುವ ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಮಕ್ಕಳನ್ನು ಗುರುಕುಲ ಮಾದರಿಯಲ್ಲಿ ಹಿಂದೂ ಸಂಪ್ರದಾಯದಂತೆ ಬರಮಾಡಿಕೊಳ್ಳಲಾಯಿತು.ಮಕ್ಕಳ ಹಣೆಗೆ ತಿಲಕವಿಟ್ಟು, ಆರತಿ ಬೆಳಗಿ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳುವ ಜೊತೆಗೆ ಸಿಹಿಯನ್ನು ನೀಡಿ ಅಭಿನಂದಿಸಲಾಯಿತು. ಕೇವಲ ಮೊದಲ ಬಾರಿಗೆ ಶಾಲೆಗೆ ಬಂದ ಮಕ್ಕಳನ್ನಲ್ಲದೆ, ಈ ಹಿಂದೆ ಕಲಿಯುತ್ತಿದ್ದ ಮಕ್ಕಳನ್ನೂ ಸೇರಿಸಿ ಬರಮಾಡಿಕೊಳ್ಳಲಾಗಿತ್ತು. ವಿದ್ಯಾಸಂಸ್ಥೆಯ ಎಲ್ಲಾ ಸಿಬ್ಬಂದಿ, ಶಿಕ್ಷಕ-ಶಿಕ್ಷಕಿಯರು ಮಕ್ಕಳನ್ನು ಬರಮಾಡಿಕೊಂಡರು.

See also  'ಉಪ್ಪಿ­ಟ್ಟುಬೇಡ, ಬಿರಿಯಾನಿ ಬೇಕು' ಎಂದ ಮಗುವಿನ ವಿಡಿಯೋ ವೈರಲ್ ಆದ ಬಳಿಕ ಸರ್ಕಾರದ ಮಹತ್ವದ ನಿರ್ಧಾರ..! ಕೇರಳ ಅಂಗನವಾಡಿ ಮೆನುಗೆ ಮೊಟ್ಟೆ ಬಿರಿಯಾನಿ ಸೇರ್ಪಡೆ..!
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget