ಕರಾವಳಿ

ರಾತ್ರಿ ವೇಳೆ ಜಡಿ ಮಳೆಯಲ್ಲಿ ನದಿಯನ್ನೇ ರಸ್ತೆ ಎಂದು ತೋರಿಸಿದ ಜಿಪಿಎಸ್..! ,ಕಾರು ಮುಳುಗಿ ಇಬ್ಬರು ಯುವ ವೈದ್ಯರು ದುರಂತ ಅಂತ್ಯ

155

ನ್ಯೂಸ್ ನಾಟೌಟ್ :ಹಿಂದಿನ ಕಾಲದಲ್ಲಿ ಅಪರಿಚಿತ ಸ್ಥಳಗಳಿಗೆ ಭೇಟಿ ಕೊಟ್ಟಾಗ ಜನ ದಾರಿ ಕೇಳಿಕೊಂಡು ಸ್ಥಳಗಳಿಗೆ ತಲುಪುತ್ತಿದ್ದರು.ಆದರೆ ಇತ್ತೀಚಿನ ದಿನಗಳಲ್ಲಿ ದಾರಿ ಕೇಳುವ ಸಂಪ್ರದಾಯ ಹೊರಟು ಹೋಗಿದೆ.ಈಗೇನಿದ್ದರೂ ಮೊಬೈಲ್ ಆನ್ ಮಾಡಿಕೊಂಡರಾಯಿತು.ಜಿಪಿಎಸ್ ಮೂಲಕ ನಮಗೆ ಬೇಕಾದ ದಾರಿಯನ್ನು ಅದುವೆ ತೋರಿಸಿಕೊಂಡು ಹೋಗುತ್ತದೆ.

ಇಲ್ಲೊಂದು ಕಡೆ ರಾತ್ರಿ ವೇಳೆ ಭಾರೀ ಮಳೆಯ ನಡುವೆ ಜಿಪಿಎಸ್ ಎಡವಟ್ಟಿನಿಂದ ಕಾರೊಂದು (Car) ನದಿಯಲ್ಲಿ ಮುಳುಗಿ ಇಬ್ಬರು ವೈದ್ಯರು ದುರಂತ ಅಂತ್ಯ ಕಂಡಿರುವ ಘಟನೆ ಕೇರಳದ (Kerala) ಎರ್ನಾಕುಲಂನಲ್ಲಿ (Ernakulam) ನಡೆದಿದೆ.

ಡಾ.ಅದ್ವೈತ್ ಅವರ ಹುಟ್ಟುಹಬ್ಬದ ಸಲುವಾಗಿ ಶಾಪಿಂಗ್‍ಗೆ ಕೊಚ್ಚಿಗೆ ಇಬ್ಬರು ಯುವ ವೈದ್ಯರು ಹೋಗಿದ್ದರು. ಶಾಪಿಂಗ್ ಮುಗಿಸಿ ಕೊಚ್ಚಿಯಿಂದ ಕೊಡುಂಗಲ್ಲೂರಿಗೆ ಹಿಂತಿರುಗುತ್ತಿದ್ದರು. ಈ ವೇಳೆ ಭಾರೀ ಮಳೆಯಾಗುತ್ತಿತ್ತು. ದಾರಿಯ ಪರಿಚಯ ಇರದ ಕಾರಣ ಜಿಪಿಎಸ್ ನೆರವು ಪಡೆದುಕೊಂಡಿದ್ದಾರೆ.ಈ ವೇಳೆ ನೀರು ತುಂಬಿದ ರಸ್ತೆಯಲ್ಲಿ ಕಾರು ಸಂಚರಿಸಿದೆ. ದಾರಿಯನ್ನು ನೇರವಾಗಿಯೇ ಜಿಪಿಎಸ್ ಮ್ಯಾಪ್‍ನಲ್ಲಿ ತೋರಿಸಿದ್ದು,ಅದೇ ಮಾರ್ಗದಲ್ಲಿ ಸಂಚರಿಸಿದ್ದಾರೆ. ಈ ವೇಳೆ ಕಾರು ನದಿಯಲ್ಲಿ ಮುಳುಗಿದೆ.

ಬದುಕುಳಿದವರಲ್ಲಿ ಒಬ್ಬರಾದ ಡಾ.ಗಾಜಿಕ್ ತಬ್ಸೀರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಈ ಮಾಹಿತಿ ಹಂಚಿಕೊಂಡಿದ್ದಾರೆ. ಅದರ ಹೊರತಾಗಿಯೂ ನಾನು ಚಾಲನೆ ಮಾಡದ ಕಾರಣ, ಇದು ಅಪ್ಲಿಕೇಶನ್‍ನ ತಾಂತ್ರಿಕ ದೋಷವೋ ಅಥವಾ ಮಾನವ ದೋಷವೋ ಎಂದು ನಾನು ಖಚಿತಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. 

See also  Hanuman movie : ʼಕೆಜಿಎಫ್‌ʼ, ʼಕಾಂತಾರʼ ದಾಖಲೆಗಳನ್ನು ಮುರಿದ 'ಹನುಮಾನ್'..!ಬಿಡುಗಡೆಯಾಗಿ ಕೇವಲ ಆರೇ ದಿನದಲ್ಲಿನ ಕಲೆಕ್ಷನ್ ನೋಡಿದ್ರೆ ನೀವು ದಂಗಾಗ್ತೀರಾ…
  Ad Widget   Ad Widget   Ad Widget   Ad Widget   Ad Widget   Ad Widget   Ad Widget