ಕರಾವಳಿ

ಚಿನ್ನಾಭರಣ ಕದ್ದು ತಲೆಮರೆಸಿಕೊಂಡಿದ್ದ ಕಳ್ಳ 3 ತಿಂಗಳ ಬಳಿಕ ಅಂದರ್..! ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ 24 ವರ್ಷದ ಯುವಕ ಕೊನೆಗೂ ತಗ್ಲಾಕ್ಕೊಂಡ..!

160

ನ್ಯೂಸ್ ನಾಟೌಟ್: ಕಳೆದ ಮೂರು ತಿಂಗಳ ಹಿಂದೆ ಚಿನ್ನಾಭರಣ ಕದ್ದು ಎಸ್ಕೇಪ್ ಆಗಿದ್ದ ಕಳ್ಳನನ್ನು ಕೊನೆಗೂ ಗೋಣಿಕೊಪ್ಪ ಪೊಲೀಸರು ಬಂಧಿಸಿದ್ದಾರೆ.

ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಮಯಾಮುಡಿ ಗ್ರಾಮದ ರಾಜ ಕಾಲೋನಿ ನಿವಾಸಿಯಾದ ಎನ್‌.ಮಂಜುನಾಥ ಎಂಬುವವರ ಮನೆಯಲ್ಲಿ ಜೂನ್ 17ರಂದು ಕಳ್ಳತನವಾಗಿತ್ತು. ಆ ಬಳಿಕ ಪೊಲೀಸರು ಬಂದು ತನಿಖೆ ನಡೆಸಿದರೂ ಕಳ್ಳನ ಬಗ್ಗೆ ಸುಳಿವು ದೊರಕಿರಲಿಲ್ಲ. ಆದರೆ ಕೊನೆಗೂ ವಿಶೇಷ ತಂಡವನ್ನು ರಚಿಸಿ ಚಾಮರಾಜನಗರ ಜಿಲ್ಲೆ ಹನೂರು, ಸಾಸ್ಯ ಗ್ರಾಮ ನಿವಾಸಿ ಎಂ. ಮಲ್ಲೇಶ (24 ವರ್ಷ) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ವಿರಾಜಪೇಟೆ ಉಪವಿಭಾಗ ಡಿಎಸ್ ಪಿ ಆರ್. ಮೋಹನ್, ಗೋಣಿಕೊಪ್ಪ ವೃತ್ತದ ಸಿಪಿಐ ಗೋವಿಂದರಾಜು ಎಂ.ಎ, ಪಿಎಸ್ ಐ ರೂಪಾದೇವಿ ಬಿರಾದಾರ್ ಒಳಗೊಂಡ ಸಿಬ್ಬಂದಿ ತಂಡ ಕಾರ್ಯನಿರ್ವಹಿಸಿತ್ತು.

See also  ಮಹಿಳೆಯೊಂದಿಗೆ ವೈದ್ಯನ ಅಸಭ್ಯ ವರ್ತನೆ,  ಇದೀಗ ವೈದ್ಯನ ಮೃತ ದೇಹವೇ ಪತ್ತೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget