ವೈರಲ್ ನ್ಯೂಸ್

ಮದುವೆಯಾಗದ ಹುಡುಗರಿಗೆ ಮದುವೆ ಮಾಡಿಸುವ ಭರವಸೆ, ಹೀಗೊಂದು ವಿಚಿತ್ರ ಚುನಾವಣಾ ಪ್ರಣಾಳಿಕೆ..!

221

ನ್ಯೂಸ್ ನಾಟೌಟ್: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ಪಕ್ಷಗಳು ಮತದಾರರನ್ನು ಓಲೈಸಲು ತಮ್ಮ ಪ್ರಣಾಳಿಕೆಯಲ್ಲಿ ಘೋಷಣೆಗಳನ್ನು ಪ್ರಕಟಿಸಿವೆ. ಕಾಂಗ್ರೆಸ್ ಬಜರಂಗ ದಳವನ್ನು ನಿಷೇಧಿಸುವ ಘೋಷಣೆ ಪ್ರಕಟಿಸಿ ಇಕ್ಕಟ್ಟಿಗೆ ಸಿಲುಕಿದ್ದರೆ ಇಲ್ಲೊಬ್ಬ ಪಕ್ಷೇತರ ಅಭ್ಯರ್ಥಿ ಮದುವೆಯಾಗದ ಹುಡುಗರಿಗೆ ಮದುವೆ ಮಾಡಿಸುವ ಭರವಸೆ ನೀಡಿ ಸುದ್ದಿಯಾಗಿದ್ದಾನೆ.

ಈತನ ಪ್ರಣಾಳಿಕೆ ಈಗ ಎಲ್ಲ ಕಡೆ ವೈರಲ್ ಆಗುತ್ತಿದೆ. ಈ ಸಲ ಹೇಗಾದರೂ ಮಾಡಿ ಗೆಲ್ಲಬೇಕು ಎಂದು ಪಣ ತೊಟ್ಟಿರುವ ಬೆಳಗಾವಿಯ ಗೋಕಾಕ್ ಅರೆಬಾವಿ ಮತಕ್ಷೇತ್ರ ಪಕ್ಷೇತರ ಅಭ್ಯರ್ಥಿ ಗುರುಪುತ್ರ ಕೆಂಪಣ್ಣ ತಮ್ಮ ಪ್ರಣಾಳಿಕೆಯಲ್ಲಿ ಮದುವೆ ಮಾಡಿಸುವ ಭರವಸೆ ನೀಡಿದ್ದಾರೆ. ಸಾಮಾನ್ಯವಾಗಿ ಉದ್ಯೋಗ, ಕೃಷಿ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳ ಬಗ್ಗೆ ಮತದಾರರನ್ನು ಓಲೈಸಲು ರಾಜಕಾರಣಿಗಳು ಮುಂದಾಗುತ್ತಾರೆ. ಆದರೆ ಮದುವೆಯಾಗದೆ ತಿರುಗಾಡುತ್ತಿರುವ ಯುವಕರಿಗೆ ಮದುವೆ ಮಾಡಿಸುವ ಕೆಲಸಕ್ಕೆ ಮುಂದಾಗಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇದೆಲ್ಲದರಿಂದ ಜೋಶ್ ಗೊಂಡ ಯುವಕರು ಈ ಸಲ ಕೆಂಪಣ್ಣ ಅವರನ್ನು ಗೆಲ್ಲಿಸುತ್ತಾರೋ ಅನ್ನುವುದನ್ನು ಕಾದು ನೋಡಬೇಕಿದೆ.

See also  ಭಾರತಕ್ಕೆ ಬಂದಿಳಿದ ಅಮೆರಿಕದ ಉಪಾಧ್ಯಕ್ಷ, ನಾಲ್ಕು ದಿನಗಳ ಭೇಟಿ, ದೆಹಲಿಯಲ್ಲಿ ಬಿಗಿ ಭದ್ರತೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget