ಕ್ರೈಂದೇಶ-ವಿದೇಶವೈರಲ್ ನ್ಯೂಸ್

ತಾನು ಇದ್ದ ಬಾಡಿಗೆ ಮನೆಯಿಂದಲೇ ಲಕ್ಷಾಂತರ ಮೌಲ್ಯದ ವಸ್ತು ದೋಚಿ ಪರಾರಿ..! ಗೋವಾ-ಕರ್ನಾಟಕ ಪೊಲೀಸರ ಜಂಟಿ ಕಾರ್ಯಾಚರಣೆ..!

179

ನ್ಯೂಸ್ ನಾಟೌಟ್: ಗೋವಾದ ಸಾಳಗಾಂವ ಎಂಬಲ್ಲಿ ಮನೆ ಮಾಲೀಕರ ಒಂದೂವರೆ ಲಕ್ಷ ರೂ. ಹಣ ಹಾಗೂ ಸುಮಾರು ಒಂದೂವರೆ ಲಕ್ಷ ರೂ. ಮೌಲ್ಯದ ವಿವಿಧ ವಸ್ತುಗಳ ಕಳ್ಳತನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಬಾಗಲಕೋಟೆಯ ಅರುಣ ಪರಶುರಾಮ ಲಮಾಣಿ (21) ಎಂಬ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯು ದುಮಿಂಗೋಸ್ ಡಿಸೋಜಾ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಬಾಡಿಗೆ ಮನೆ ಬಿಟ್ಟು ಹೋಗುವ ಸಂದರ್ಭದಲ್ಲಿ ಆರೋಪಿಯು ಮನೆ ಮಾಲೀಕರ ಹಣ ಮತ್ತು ವಿವಿಧ ವಸ್ತುಗಳ ಕಳ್ಳತನ ಮಾಡಿ ಪರಾರಿಯಾಗಿದ್ದ ಎಂಬ ಆರೋಪವಿದೆ.

ತನ್ನ ಮನೆ ದೋಚಿ ಬಾಡಿಗೆದಾರ ಪರಾರಿಯಾಗಿದ್ದಾನೆ ಎಂದು ತಿಳಿದ ಕೂಡಲೇ ಶಂಕಿತ ಆರೋಪಿಯ ಮೊಬೈಲ್ ಗೆ ಮನೆ ಮಾಲೀಕ ಕರೆ ಮಾಡಿದ್ದಾರೆ. ಆತನನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ನಂತರ ಮನೆ ಮಾಲೀಕ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದರು.

ಗೋವಾದ ಸಾಳಗಾಂವ ಪೋಲಿಸರು ಕರ್ನಾಟಕದ ಬಾಗಲಕೋಟೆಗೆ ತೆರಳಿ ಕರ್ನಾಟಕ ಪೋಲಿಸರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.

Click

https://newsnotout.com/2024/10/darshan-thugudeepa-got-bail-kannada-news-viral-news-d/
https://newsnotout.com/2024/10/house-car-issue-cctv-putage-viral-news-madyapradesh/
https://newsnotout.com/2024/10/social-media-kananda-news-7-people-arrested-viral-news-s/
https://newsnotout.com/2024/10/yash-acting-kannada-cinema-toxic-tree-cutting-eshwar-kandre-allegation/
See also  ವಿಟ್ಲ: ದ್ವಿಚಕ್ರ ವಾಹನಕ್ಕೆ ಗುದ್ದಿ ಆಟೋ ರಿಕ್ಷಾಗೂ ಅಪ್ಪಳಿಸಿದ ರಿಕ್ಷಾ..!, ಸವಾರನಿಗೆ ಗಂಭೀರ ಗಾಯ
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget