ಕರಾವಳಿಬೆಂಗಳೂರು

ನೇತ್ರಾವತಿ ನದಿಗೆ ಹಾರಿದ್ದ ಯುವತಿ ಅಂದು ಬದುಕುಳಿದಳು..!, ಬೆಂಗಳೂರಿನ ಅಪಾರ್ಟ್‍ಮೆಂಟ್‍ವೊಂದರಿಂದ ಜಿಗಿದು ಇಂದು ದುರಂತ ಅಂತ್ಯವನ್ನೇ ಕಂಡಳು

160

ನ್ಯೂಸ್ ನಾಟೌಟ್ : ಧರ್ಮಸ್ಥಳ ಸಮೀಪದ ನೇತ್ರಾವತಿಗೆ ಹಾರಿ ಪ್ರಾ*ಣ ಕ*ಳೆದುಕೊಳ್ಳಲು ಯತ್ನಿಸಿದ್ದ ಯುವತಿಯೋರ್ವಳು ಇದೀಗ ಬೆಂಗಳೂರಿನ ಅಪಾರ್ಟ್ ಮೆಂಟ್ ವೊಂದರಿಂದ ಜಿಗಿದು ದಾರುಣ ಅಂತ್ಯ ಕಂಡಿರುವ ಘಟನೆ (Bengaluru) ನಡೆದಿದೆ.ವಿಜಯಲಕ್ಷ್ಮಿ (17) ಉಸಿರು ಚೆಲ್ಲಿದ ಯುವತಿಯೆಂದು ತಿಳಿದು ಬಂದಿದೆ.

ಈ ಘಟನೆ ನಡೆದಿದ್ದು ಬೆಂಗಳೂರಿನ ಬ್ಯಾಟರಾಯನಪುರದಲ್ಲಿ.ಖಿನ್ನತೆಯಿಂದ ಬಳಲುತ್ತಿದ್ದ ಈಕೆ ಈ ಹಿಂದೆಯೂ ಈ ಕೃತ್ಯವೆಸಗಿದ್ದಳು.ಆದರೆ ಅದೃಷ್ಟವಶಾತ್ ಆಕೆ ಬದುಕುಳಿದಿದ್ದಳು.ಆದರೆ ಬೆಂಗಳೂರಿನ ಬ್ರೈಡ್ ಅಪಾರ್ಟ್ ಮೆಂಟ್ ಕಟ್ಟಡದ ಮೇಲಿಂದ ಮತ್ತೊಮ್ಮೆ ಜಿಗಿದು ದುರಂತ ಅಂತ್ಯವನ್ನೇ ಕಂಡಿದ್ದಾಳೆ.

ಈ ಹಿಂದೆ ನೇತ್ರಾವತಿ ನದಿಗೆ ಹಾರಲು ಯತ್ನಿಸಿದ್ದಳು. ಈ ವೇಳೆ ಸ್ಥಳೀಯರು ಇದನ್ನು ಗಮನಿಸಿ ಆಕೆಯನ್ನು ರಕ್ಷಣೆ ಮಾಡಿದ್ದರು. ಮಾತ್ರವಲ್ಲ ಬುದ್ಧಿವಾದ ಹೇಳಿ ಕಳುಹಿಸಿದ್ರು ಎನ್ನಲಾಗಿದೆ. ಪೋಷಕರಿಗೆ ಫೋನ್ ಮಾಡಿ ತಿಳಿ ಹೇಳಿ ಯುವತಿ ಯನ್ನು ವಾಪಸ್ ಕಳುಹಿಸಿದ್ರು ಎನ್ನಲಾಗಿದೆ.

ಆದರೆ ಅಲ್ಲಿಂದ ಹೊರಟ ಆಕೆ ಬೆಂಗಳೂರಿಗೆ ವಾಪಸ್ ಬಂದು ಅಪಾರ್ಟ್ ಮೆಂಟ್ ನ ಟೆರೇಸ್ ಮೇಲಿಂದ ಬಿದ್ದಿದ್ದಾಳೆ. ಇತ್ತ ಪುತ್ರಿ ಕಾಣೆಯಾಗಿದ್ದ ಬಗ್ಗೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೈಂಟ್ ಕೂಡ ದಾಖಲಾಗಿತ್ತು. ಸದ್ಯ ಯುವತಿ ಪ್ರಕರಣ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

https://www.youtube.com/watch?v=pw95EAmlpP8
See also  ಉಡುಪಿ:ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಅವರ ಹೊಸ ಕಾರು ಹೇಗಿದೆ ಗೊತ್ತಾ? 62 ಕಿ.ಮೀ ಮೈಲೇಜ್, 3.3 ಕೋಟಿ ಬೆಲೆ..!ಕಾರಿನ ವಿಶೇಷತೆಗಳೇನು?ವಿಡಿಯೋ ವೀಕ್ಷಿಸಿ..
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget