ಕರಾವಳಿ

ಬೆಳ್ಳಾರೆ: ಗಣೇಶೋತ್ಸವದಲ್ಲಿ ತಡರಾತ್ರಿ ಡಿಜೆಗೆ ಅವಕಾಶ ಕೊಡಲ್ಲ ಎಂದ ಪೊಲೀಸರು..! ವಿಘ್ನ ನಿವಾರಕನ ವಿಸರ್ಜನೆ ವೇಳೆ ಡಿಜೆ ಬೇಕೆಂದು ಪೊಲೀಸರೆದುರು ಯುವಕರ ತೀವ್ರ ವಾಗ್ವಾದ..! ಪ್ರಕರಣ ಸುಖಾಂತ್ಯ

182

ನ್ಯೂಸ್ ನಾಟೌಟ್: ಗಣೇಶೋತ್ಸವ ಸಂಭ್ರಮದ ವೇಳೆ ಯುವಕರ ಗುಂಪೊಂದು ಪೊಲೀಸರ ಜೊತೆ ತೀವ್ರ ವಾಗ್ವಾದ ನಡೆಸಿರುವ ಘಟನೆ ಸುಳ್ಯ ತಾಲೂಕಿನ ಬಾಳಿಲದಲ್ಲಿ ಮಂಗಳವಾರ (ಸೆ.19) ರಾತ್ರಿ ನಡೆದಿದೆ ಎಂದು ತಿಳಿದು ಬಂದಿದೆ.

ಬೆಳ್ಳಾರೆ ಪೊಲೀಸ್ ಠಾಣೆ ವ್ಯಾಪ್ತಿಯ ಬಾಳಿಲದಲ್ಲಿ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಲಾಯಿತು. ವಿಘ್ನ ನಿವಾರಕನ ನೀರಿಗೆ ಬಿಡುವ ಸಂದರ್ಭಕ್ಕೆ ಸರಿಯಾಗಿ ಪೊಲೀಸರು ಇಂದು ರಾತ್ರಿ 10 ಗಂಟೆ ಬಳಿಕ ಡಿಜೆ ಹಾಕುವಂತಿಲ್ಲ ಎಂದು ಸೂಚಿಸಿದ್ದಾರೆ. ಉತ್ಸವ ನಡೆದ ಜಾಗದಿಂದ ವಿಸರ್ಜನೆ ಜಾಗಕ್ಕೆ ಸುಮಾರು ಎರಡೂವರೆ ಕಿ.ಮೀ. ದೂರವಿದೆ.  ಪಾಜಪಳ್ಳ ಹೊಳೆಯಲ್ಲಿ ವಿಸರ್ಜನೆಗೆ ಹೋಗುವಾಗ 10 ಗಂಟೆ ಕಳೆಯಬಹುದು. 10 ಗಂಟೆ ನಂತರ ಡಿಜೆ ಅಳವಡಿಸುವಂತಿಲ್ಲಎಂಬ ನಿಯಮವನ್ನು ಪೊಲೀಸರು ವಿವರಿಸಿದ್ದಾರೆ. ಈ ವೇಳೆ ಯುವಕರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಗೊಂದಲ ಮುಂದುವರಿದು ಕೊನೆಗೆ ಪೊಲೀಸರು ಅವಕಾಶ ನೀಡಿದ್ದಾರೆ. ಇದರೊಂದಿಗೆ ಪ್ರಕರಣ ಸುಖಾಂತ್ಯ ಕಂಡಿದೆ ಎಂದು ತಿಳಿದುಬಂದಿದೆ.

See also  ಕಾಂಗ್ರೆಸ್ ಮಾಧ್ಯಮ ವಕ್ತಾರರಾಗಿ ಸುಳ್ಯದ ಹಿರಿಯ ನಾಯಕ ಭರತ್ ಮುಂಡೊಡಿ ಆಯ್ಕೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget