ಕ್ರೈಂವೈರಲ್ ನ್ಯೂಸ್

ಗಾಂಧಿವಾದ ಕಿತ್ತೊಗೆಯಬೇಕು ಎಂದದ್ದೇಕೆ ಅಹಿಂಸಾ ಚೇತನ್..? ಏನಿದು ವಿವಾದ? ಆತನ ಟ್ವೀಟ್ ‘ಎಕ್ಸ್’ ನಲ್ಲೇನಿದೆ?

160

ನ್ಯೂಸ್ ನಾಟೌಟ್: ಧಾರ್ಮಿಕ ಸಾಮರಸ್ಯ ಎಂದರೆ ಅಸಮಾನತೆಯ ಸಂರಕ್ಷಣೆ. ಆದ್ದರಿಂದ ಗಾಂಧಿವಾದವನ್ನು ಕಿತ್ತೊಗೆಯಬೇಕು ಎಂದು ನಟ ಚೇತನ್‌ ಅಹಿಂಸಾ ಚೇತನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ಕುರಿತು ಟ್ವಿಟ್ಟರ್ ಎಕ್ಸ್‌ ನಲ್ಲಿ ಬರೆದುಕೊಂಡಿರುವ ನಟ, ” ಗಾಂಧಿಯವರ ‘ಧಾರ್ಮಿಕ ಸಾಮರಸ್ಯ’ ಇಂದಿನ ಅಗತ್ಯ ಎಂದು ಪ್ರತಿಪಾದಿಸುವ ಉದಾರವಾದಿಗಳಿಗೆ ನಮ್ಮ ಸಾಂವಿಧಾನಿಕ ತತ್ವಗಳು ಅರ್ಥವಾಗುತ್ತಿಲ್ಲ.

ಖಾಸಗಿಯಾಗಿ, ನಾವೆಲ್ಲರೂ ಧರ್ಮದ ಹಕ್ಕನ್ನು ಹೊಂದಿದ್ದೇವೆ (ಆರ್ಟಿಕಲ್ 25); ಸಾರ್ವಜನಿಕವಾಗಿ, ನಾವು ಜಾತ್ಯತೀತ ರಾಷ್ಟ್ರ – ಅಂದರೆ ಧರ್ಮದಿಂದ ದೂರ ಇರುವುದಾಗಿದೆ, ಹಾಗೂ ಧಾರ್ಮಿಕ ಸಾಮರಸ್ಯ ಎಂದರೆ ಅಸಮಾನತೆಯ ಸಂರಕ್ಷಣೆ ಆದ್ದರಿಂದ ಗಾಂಧಿವಾದವನ್ನು ಕಿತ್ತೊಗೆಯಬೇಕು ಎಂದು ವಿವಾದಾತ್ಮಕ ಪೋಸ್ಟ್ ಯೊಂದನ್ನು ಹಂಚಿಕೊಂಡಿದ್ದಾರೆ.‌

ಈ ಬಗ್ಗೆ ಹಲವರು ಪರ ವಿರೋಧ ಚರ್ಚೆ ಮಾಡುತ್ತಿದ್ದು, ಚೇತನ್ ಪೋಸ್ಟ್ ಭಾರಿ ವಿವಾದಕ್ಕೆ ಕಾರಣವಾಗಿದೆ.

See also  ಶಾಲೆಯಲ್ಲಿ ಹುಡುಗಿ ಜತೆಗಿನ ಫ್ರೆಂಡ್ ಶಿಪ್ ಜಗಳಕ್ಕೆ ತಿರುಗಿದ್ದೇಗೆ? ಸಹಪಾಠಿಯನ್ನೇ ಕೊಂದ 10ನೇ ತರಗತಿ ವಿದ್ಯಾರ್ಥಿ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget