ನ್ಯೂಸ್ ನಾಟೌಟ್: ಜ್ಯೋತಿಷಿ ತ್ರಿಶಾಲಾ (Astrologer Trishla)ಹೇಳಿದ ಪರಿಹಾರವನ್ನು ಎಷ್ಟು ನಂಬಬೇಕು ಮತ್ತು ಎಷ್ಟು ನಂಬಬಾರದು ಅನ್ನೋದು ನಿಮಗೆ ಬಿಟ್ಟಿದ್ದು. ಜ್ಯೋತಿಷಿ ತ್ರಿಶಾಲಾ ಉಲ್ಲೇಖಿಸಿದ ವಿಧಾನದ ಬಗ್ಗೆ ನಾವು ಇಲ್ಲಿ ಮಾಹಿತಿಯನ್ನು ನೀಡುತ್ತಿದ್ದೇವೆ, ಆ ಪರಿಹಾರದಿಂದ ಹಣವನ್ನು ಪಡೆಯಬಹುದು ಎಂದು ಹೇಳಲಾಗಿದೆ.
ಜ್ಯೋತಿಷಿ ತ್ರಿಶಾಲ ಸ್ನಾನಕ್ಕೆ ಸಂಬಂಧಿಸಿದ ಒಂದು ವಿಧಾನವನ್ನು ತಿಳಿಸಿದ್ದಾರೆ. ಅದು ನಿಮ್ಮನ್ನು ಲಕ್ಷ್ಮಿ ದೇವಿಯ ಕೃಪೆಗೆ ಅರ್ಹರನ್ನಾಗಿ ಮಾಡುತ್ತದೆ. ಅವರ ವೀಡಿಯೊದ ಪ್ರಕಾರ, ಸ್ನಾನ ಮಾಡುವಾಗ ಮಾಡುವ ಯಾವ ಕೆಲಸ ನಿಮ್ಮನ್ನು ಮಿಲಿಯನೇರ್ ಮಾಡಬಹುದು ಅನ್ನೋದನ್ನು ನೋಡೋಣ. ಇದಕ್ಕಾಗಿ ಗುಲಾಬಿ ಹೂವಿನ ಅಗತ್ಯವಿರುತ್ತದೆ. ಶುಕ್ರವಾರದಂದು ಗುಲಾಬಿ ಹೂವನ್ನು (rose petals) ತೆಗೆದುಕೊಂಡು ಒಂದು ದಳವನ್ನು ಕಿತ್ತು ಪಕ್ಕಕ್ಕೆ ಇಡಬೇಕು. ಉಳಿದ ದಳಗಳನ್ನು ಸ್ನಾನದ ನೀರಿಗೆ ಸೇರಿಸಬೇಕು. ಸ್ನಾನದ ನೀರನ್ನು ಹೊಂದಿರುವ ಬಕೆಟ್ ಗೆ ಅರಿಶಿನ ಮತ್ತು ಒಂದು ರೂಪಾಯಿ ನಾಣ್ಯವನ್ನು ಸೇರಿಸಿ, ಜೊತೆಗೆ ಚಿಟಿಕೆ ಅರಿಶಿನ ಮತ್ತು ಗುಲಾಬಿ ದಳಗಳನ್ನು ಸೇರಿಸಬೇಕು.
ತಾಯಿ ಲಕ್ಷ್ಮಿಯನ್ನು ನೆನೆದು ಈ ನೀರನ್ನು ಮಗ್ ಸಹಾಯದಿಂದ ನಿಮ್ಮ ಶರೀರದ ಮೇಲೆ ಏಳು ಬಾರಿ ಸುರಿಯಬೇಕು. ಈ ಸಮಯದಲ್ಲಿ, ಲಕ್ಷ್ಮಿ ದೇವಿಯ ಸ್ಮರಣೆ ಮುಂದುವರಿಯಬೇಕು. ಲಕ್ಷ್ಮೀ ದೇವಿಯ ಅನುಗ್ರಹ ನಿಮ್ಮ ಜೀವನದಲ್ಲಿ ಸದಾ ಇರುತ್ತೆ ಅನ್ನೋದನ್ನು ನೀವು ಯೋಚನೆ ಮಾಡುತ್ತಲೇ ಇರಬೇಕು. ಸ್ನಾನದ ನಂತರ, ಉಳಿದ ಗುಲಾಬಿ ದಳವನ್ನು ಗಂಗಾ ನೀರಿನಿಂದ ಶುದ್ಧೀಕರಿಸಬೇಕು. ನಂತರ, ಅದನ್ನು ಮನೆಯ ದೇವಾಲಯಕ್ಕೆ ತೆಗೆದುಕೊಂಡು ಹೋಗಬೇಕು ಮತ್ತು ಅದರ ಮೇಲೆ ಕುಂಕುಮ ಮತ್ತು ಅರಿಶಿನವನ್ನು ಅರ್ಪಿಸಬೇಕು.
ಬಳಿಕ ಲಕ್ಷ್ಮಿ ದೇವಿಯನ್ನು ಸ್ಮರಣೆ ಮಾಡುತ್ತಾ, ಗುಲಾಬಿ ದಳಗಳನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು. ಇದನ್ನು ಮನೆಯ ಲಾಕರ್ ನಲ್ಲೂ ಸಹ ಇಡಬಹುದು. ಇದನ್ನು ಬೆಳ್ಳಿಯ ತಾಯತ ಅಥವಾ ಪೆಟ್ಟಿಗೆಯಲ್ಲಿ ಸಹ ಇಡಬಹುದು. ನೀವು ನಿರಂತರವಾಗಿ ಏಳು ಶುಕ್ರವಾರಗಳವರೆಗೆ ನಿಯಮಿತವಾಗಿ ಮಾಡಬೇಕು. ಎಲೆಗಳನ್ನು ಅದೇ ಸ್ಥಳದಲ್ಲಿ ಇರಿಸಿ.ಅಂದ್ರೆ ಪ್ರತಿ ಬಾರಿಯೂ ಕುಂಕುಮ ಮತ್ತು ಅರಿಶಿನದಿಂದ ಅಲಂಕರಿಸಲ್ಪಟ್ಟ ಉಳಿದ ಗುಲಾಬಿ ಎಲೆಯನ್ನು ಹೊರಕ್ಕೆ ಎಸೆಯೋಕೆ ಹೋಗಬೇಡಿ, ಬದಲಾಗಿ ಅದೇ ಜಾಗದಲ್ಲಿ ಇರಿಸಿ. ಹೊಸ ಗುಲಾಬಿ ಎಸಳನ್ನು ಮತ್ತೆ ಅದರ ಮೇಲೆ ಹಾಕಿ. ಇದರಿಂದ ಲಕ್ಷ್ಮೀ ದೇವಿಯ (Goddess Lakshmi) ಕೃಪೆ ನಿಮ್ಮ ಮೇಲಿರುತ್ತೆ. ನಿಮಗೆ ಯಾವತ್ತೂ ಸಂಪತ್ತಿನ ಕೊರತೆ ಬರೋದಿಲ್ಲ ಎಂದು ಜ್ಯೋತಿಷಿ ತ್ರಿಶಾಲಾ ಹೇಳುತ್ತಾರೆ.
View this post on Instagram