Latestದೇಶ-ವಿದೇಶವೈರಲ್ ನ್ಯೂಸ್

ಈ ರೈಲಿನಲ್ಲಿ ನೀವು ಪ್ರಯಾಣಿಸಿದರೆ 3 ಹೊತ್ತು ಉಚಿತ ಊಟ..! ಕಳೆದ 29 ವರ್ಷಗಳಿಂದ ಈ ಸೇವೆ..! ಇಲ್ಲಿದೆ ಸಂಪೂರ್ಣ ಮಾಹಿತಿ

823

ನ್ಯೂಸ್ ನಾಟೌಟ್: ರೈಲ್ವೆ ಇಲಾಖೆ ಒಟ್ಟು 13,452 ರೈಲುಗಳನ್ನು ನಿಯೋಜಿಸಿದೆ, ಈ ಸಾವಿರಾರು ರೈಲುಗಳಲ್ಲಿ ಕೇವಲ ಒಂದು ರೈಲು ಮಾತ್ರ ಪ್ರಯಾಣಿಕರಿಗೆ ಉಚಿತ ಆಹಾರವನ್ನು ಒದಗಿಸುತ್ತದೆ. ಈ ರೈಲು ಪ್ರಯಾಣದ ಆನಂದವನ್ನು ನೀಡುವುದಲ್ಲದೆ, ದಾರಿಯುದ್ದಕ್ಕೂ ಉಚಿತ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಸಹ ಒದಗಿಸುತ್ತದೆ.

ಈ ವಿಶೇಷ ರೈಲು ದೇಶದ ಎರಡು ಪ್ರಸಿದ್ಧ ಧಾರ್ಮಿಕ ಸ್ಥಳಗಳ ನಡುವೆ ಚಲಿಸುತ್ತದೆ ಮತ್ತು ಭಕ್ತರಿಗೆ ದರ್ಶನದ ಅವಕಾಶವನ್ನು ಕಲ್ಪಿಸುತ್ತದೆ. ಆದರಂತೆ, ಕಳೆದ 29 ವರ್ಷಗಳಿಂದ ಈ ರೈಲಿನ ಪ್ರಯಾಣಿಕರಿಗೆ ಉಚಿತ ಆಹಾರವನ್ನು ನೀಡಲಾಗುತ್ತಿದೆ. ಭಾರತೀಯ ರೈಲ್ವೆಯ ಇತರ ರೈಲುಗಳಲ್ಲಿ ಆಹಾರ ಸೌಲಭ್ಯವಿದ್ದರೂ, ಅದಕ್ಕೆ ಪಾವತಿ ಮಾಡಬೇಕಾಗುತ್ತದೆ. ಆದರೆ, ಈ ರೈಲು ಯಾವುದೇ ಶುಲ್ಕವಿಲ್ಲದೆ ಉಪಹಾರ ಮತ್ತು ಭೋಜನವನ್ನು ಉಚಿತವಾಗಿ ಒದಗಿಸುವ ಏಕೈಕ ರೈಲು ಸೇವೆಯಾಗಿದೆ.

ಸಚ್ಖಂಡ್ ಎಕ್ಸ್‌ ಪ್ರೆಸ್ (12715) ರೈಲು ಇದಾಗಿದ್ದು, ಮಹಾರಾಷ್ಟ್ರದ ನಾಂದೇಡ್ ನಗರದಿಂದ ಪಂಜಾಬ್‌ ನ ಅಮೃತಸರ ನಗರಕ್ಕೆ ಸಂಚರಿಸುತ್ತದೆ. ಈ ರೈಲು ಅಮೃತಸರದ ಪ್ರಮುಖ ಧಾರ್ಮಿಕ ಸ್ಥಳವಾದ ಶ್ರೀ ಹರ್ಮಂದರ್ ಸಾಹಿಬ್ ಗುರುದ್ವಾರ ದಿಂದ ಹೊರಟು, ನಾಂದೇಡ್‌ ನ ಶ್ರೀ ಹಜೂರ್ ಸಾಹಿಬ್ ಗುರುದ್ವಾರಕ್ಕೆ ತಲುಪುತ್ತದೆ. ಈ ರೈಲು ಈ ಎರಡು ಪವಿತ್ರ ಸ್ಥಳಗಳ ನಡುವಿನ ಸಂಪರ್ಕವನ್ನು ಒದಗಿಸುತ್ತದೆ.

ಸಚ್ಖಂಡ್ ಎಕ್ಸ್‌ ಪ್ರೆಸ್ ರೈಲು ಸುಮಾರು 2,000 ಕಿ.ಮೀ ದೂರವನ್ನು ಕ್ರಮಿಸುತ್ತದೆ ಮತ್ತು ಈ ಸಮಯದಲ್ಲಿ 39 ನಿಲ್ದಾಣಗಳಲ್ಲಿ ನಿಲುಗಡೆ ಮಾಡುತ್ತದೆ. ಪ್ರಯಾಣದ ಸಮಯದಲ್ಲಿ 6 ನಿಲ್ದಾಣಗಳಲ್ಲಿ ಲಂಗಾರ್ ಆಯೋಜಿಸಲಾಗುತ್ತದೆ, ಅಲ್ಲಿ ಪ್ರಯಾಣಿಕರಿಗೆ ಉಚಿತ ಆಹಾರವನ್ನು ಒದಗಿಸಲಾಗುತ್ತದೆ. ಈ ನಿಲ್ದಾಣಗಳು: ಹೊಸ ದೆಹಲಿ, ಭೋಪಾಲ್, ಪರ್ಭಾನಿ, ಜಲ್ನಾ, ಔರಂಗಾಬಾದ್, ಮರಾಠವಾಡ. ಮುಂದುವರೆದು, ಈ ಪ್ರಯಾಣವನ್ನು ಪೂರ್ಣಗೊಳಿಸಲು ರೈಲು ಸುಮಾರು 33 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ರೈಲಿನ ನಿಲುಗಡೆಗಳನ್ನು ಪ್ರಯಾಣಿಕರು ಆರಾಮವಾಗಿ ಆಹಾರವನ್ನು ಸೇವಿಸುವಂತೆ ಯೋಜಿಸಲಾಗಿದೆ. ಆದರಂತೆ, ನಿಲ್ದಾಣಕ್ಕೆ ತಕ್ಕಂತೆ ರೈಲಿನ ಉಚಿತ ಆಹಾರದ ಮೆನು ಸಹ ಸತತವಾಗಿ ಬದಲಾಗುತ್ತಿರುತ್ತದೆ, ಆದರೆ ಸಾಮಾನ್ಯವಾಗಿ ಅನ್ನ-ಸಾಂಬಾರ್​, ಚೋಲೆ, ದಾಲ್, ಖಿಚಡಿ, ಪಲ್ಯವಾಗಿರುತ್ತದೆ.

ಇನ್ನು ರೈಲಿನಲ್ಲಿ ಒದಗಿಸಲಾಗುವ ಈ ಉಚಿತ ಆಹಾರ ಯೋಜನೆಯ ವೆಚ್ಚವನ್ನು ಗುರುದ್ವಾರಗಳಿಗೆ ಬರುವ ದೇಣಿಗೆಗಳಿಂದ ಭರಿಸಲಾಗುತ್ತದೆ.

21 ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿನಿ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ..! ಆಕೆಯ ಓದಿಗಾಗಿ ಆಂದ್ರದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದ ಕುಟುಂಬ..!

4,500 ಎಕರೆ ಜಾಗಕ್ಕೆ ಸರ್ಕಾರ ಮತ್ತು ರಾಜ ಮನೆತನದ ನಡುವೆ ಜಟಾಪಟಿ..? ಅರಮನೆ ಹೆಸರಿಗೆ ಜಮೀನು ಬಂದ್ರೂ ಗ್ರಾಮಸ್ಥರು ಆತಂಕ ಪಡಬೇಕಿಲ್ಲ ಎಂದ ರಾಜಮಾತೆ..!

See also  ಬೆಂಗಳೂರಿಗೆ ನಾಲ್ಕೂವರೆ ಸಾವಿರ ಎಲೆಕ್ಟ್ರಿಕ್ ಬಸ್​ ನೀಡುತ್ತೇನೆ ಎಂದ ಹೆಚ್.​ಡಿ ಕುಮಾರಸ್ವಾಮಿ..! ಪ್ರತಿ ಪಂಚಾಯಿತಿ ಮಟ್ಟದಲ್ಲಿ ಉಚಿತ ಇಂಗ್ಲಿಷ್ ಶಾಲೆ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget