ನ್ಯೂಸ್ ನಾಟೌಟ್: ನಂಬಿದವರಿಗೆ ಇಂಬು ನೀಡುವ ಕಾರ್ಕಳ ತಾಲೂಕಿನಲ್ಲಿರುವ ಎರ್ಲಪಾಡಿ ಕರ್ವಾಲಿನ ಇತಿಹಾಸ ಪ್ರಸಿದ್ಧ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಮಾಜಿ ಕ್ರಿಕೆಟಿಗ, ಖ್ಯಾತ ಕಮೆಂಟೇಟರ್ ರವಿಶಾಸ್ತ್ರಿ ಭೇಟಿ ನೀಡಿದರು.ಭಾರತ ತಂಡದ ಮಾಜಿ ಕ್ಯಾಪ್ಟನ್ ರವಿಶಾಸ್ತ್ರಿ ಅವರ ಪೂರ್ವಜರು ಕಾರ್ಕಳ ತಾಲೂಕಿನ ಎರ್ಲಪಾಡಿಯವರು. ಹೀಗಾಗಿ ಮೂಲ ನಾಗದೇವರಿಗೆ ಸರ್ವಸೇವೆ ನೀಡಿದರು.
14 ವರ್ಷಗಳ ಹಿಂದೆ ಪತ್ನಿ ಸಮೇತ ಕ್ಷೇತ್ರಕ್ಕೆ ಭೇಟಿ ನೀಡಿದ್ದ ರವಿಶಾಸ್ತ್ರಿಯವರು ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.ಎರ್ಲಪಾಡಿ ಕ್ಷೇತ್ರದ ದೇವರ ಆಶೀರ್ವಾದದಿಂದ ಈ ದಂಪತಿ ಮಗಳನ್ನು ಪಡೆದಿದ್ದರು. ಅಂದಿನಿಂದ ಇಂದಿನವರೆಗೆ ರವಿಶಾಸ್ತ್ರಿ ಪ್ರತಿವರ್ಷ ಒಂದೆರಡು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸುತ್ತಿದ್ದಾರೆ.