ಕರಾವಳಿಸುಳ್ಯ

ಸುಳ್ಯಕ್ಕೆ ವಲಯಾರಣ್ಯಾಧಿಕಾರಿಯಾಗಿ ಮಂಜುನಾಥ್ ನೇಮಕ! ಸುಳ್ಯ, ಪಂಜ ರೇಂಜರ್ ಗಳ ವರ್ಗಾವಣೆ !

252

ನ್ಯೂಸ್ ನಟೌಟ್:  ಸುಳ್ಯ‌ ಹಾಗೂ ಪಂಜ ವಲಯಾರಣ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಿ ಸರಕಾರ ಮಾರ್ಚ್ 25ರಂದು ಆದೇಶ ಮಾಡಿದೆ. ಪಂಜ ವಲಯದಲ್ಲಿರುವ ಮಂಜುನಾಥ್ ರನ್ನು ಸುಳ್ಯ ರೇಂಜರ್ ಆಗಿ ಹಾಗೂ ಸುಳ್ಯದಲ್ಲಿರುವ ಗಿರೀಶ್ ಅವರನ್ನು ಪಂಜಕ್ಕೆ ವರ್ಗಾವಣೆ ಮಾಡಲಾಗಿದೆ.

ಮಂಜುನಾಥ್ ರವರು ಈ ಹಿಂದೆ ಸುಬ್ರಹ್ಮಣ್ಯ ವಲಯದಲ್ಲಿ ಹಾಗೂ ಸುಳ್ಯದಲ್ಲಿ ರೇಂಜರ್ ಆಗಿ ಕರ್ತವ್ಯ ನಿರ್ವಹಿಸಿ ಬಳಿಕ ಪಂಜಕ್ಕೆ ವರ್ಗಾವಣೆಯಾಗಿದ್ದರು. ಇದೀಗ ಅವರಿಗೆ ಮತ್ತೆ ಸುಳ್ಯಕ್ಕೆ ವರ್ಗಾವಣೆಯಾಗಿದೆ.

ಗಿರೀಶ್ ಆರ್ ರವರು ಪಂಜ ವಲಯಾರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಬಳಿಕ ಸುಳ್ಯಕ್ಕೆ ಬಂದಿದ್ದರು.

See also  ಮಂಗಳೂರಿನಿಂದ ಬಂದ 340 ಕೆ.ಜಿ. ತೂಕದ ಬೃಹತ್ ಮೀನಿಗೆ ಚಿಕ್ಕಮಗಳೂರಿನಲ್ಲಿ ಭಾರಿ ಡಿಮ್ಯಾಂಡ್..!,ಆ ಮೀನಿನ ಹೆಸರೇನು ಗೊತ್ತಾ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget