ಕೊಡಗು

ಮಡಿಕೇರಿ:28 ದಿನಗಳ ಹಿಂದೆಯಷ್ಟೇ ನೇಮಕಗೊಂಡಿದ್ದ ಅಧಿಕಾರಿ ಸಾವು,ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಫಲಿಸದ ಚಿಕಿತ್ಸೆ

106
Spread the love

ನ್ಯೂಸ್‌ ನಾಟೌಟ್‌ : ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ  ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.ಮೃತ ಅಧಿಕಾರಿಯನ್ನು ಶ್ರೀಧರ್ ಮೂರ್ತಿ ಎಂದು ಗುರುತಿಸಲಾಗಿದೆ.

ಏನಾಗಿತ್ತು?

ಎಂದಿನಂತೆ ಅವರು ಕಚೇರಿಗೆ ಬಂದು ತಮ್ಮ ಕೆಲಸ ಕಾರ್ಯದಲ್ಲಿ ತೊಡಗಿದ್ದರು. ಇದೇ ದಿನ ಕಚೇರಿಯಲ್ಲಿ ಸಭೆ ಇತ್ತು. ಸಭೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಇನ್ನೇನು ಸಭೆ ಆರಂಭವಾಗಬೇಕು ಅನ್ನುವಷ್ಟರಲ್ಲಿ ಕುಸಿದು ಬಿದ್ದಿದ್ದಾರೆ. ಗಾಬರಿಯಾದ ಸಿಬ್ಬಂದಿ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಅವರು ಸಾವನ್ನಪ್ಪಿದ್ದಾರೆ.

ಮೂಲತಃ ಚಿತ್ರದುರ್ಗ ಜಿಲ್ಲೆಯವರಾದ ಇವರು 28 ದಿನಗಳ ಹಿಂದಷ್ಟೇ ಕೊಡಗು ಆಹಾರ ಮತ್ತು ನಾಗರಿಕ ಸರಬರಾಜು ಡಿಡಿ ಆಗಿ ಬಂದಿದ್ದರು ಎಂದು ತಿಳಿದು ಬಂದಿದೆ.

See also  ಸಂಪಾಜೆ: ಕಮರಿಗೆ ಜಾರಿದ ರಿಕ್ಷಾ, ಗ್ಲಾಸ್ ಸೇರಿದಂತೆ ಮುಂಭಾಗ ಜಖಂ
  Ad Widget   Ad Widget   Ad Widget   Ad Widget   Ad Widget   Ad Widget