ಕರಾವಳಿಕ್ರೈಂ

ಮೀನುಗಾರಿಕೆಗೆ ತೆರಳಿದ್ದ ಮೀನುಗಾರ ಬೋಟ್‌ನಿಂದ ಬಿದ್ದು ಸಾವು

ನ್ಯೂಸ್‌ ನಾಟೌಟ್‌: ಮೀನುಗಾರಿಕೆಗೆ ತೆರಳಿದ್ದ ಮೀನುಗಾರನೊಬ್ಬ ಆಯತಪ್ಪಿ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ಕಾಪು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಮೀನುಗಾರನನ್ನು ರಾಜನ್‌ (32) ಎಂದು ಗುರುತಿಸಲಾಗಿದೆ. ಈತ ತಮಿಳುನಾಡು ರಾಮೇಶ್ವರ ರಾಮನಗರ ಮಹಾಪುರಂ ನಿವಾಸಿ ತುತ್ರಿಯನ್‌ ಎಂಬವರ ಮೀನುಗಾರಿಕಾ ಬೋಟ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ರಾಜನ್‌ ಅವರು ಮೇ 1ರಂದು ರಾತ್ರಿ ಬೋಟ್‌ನಲ್ಲಿ ಮಲ್ಪೆಯಿಂದ ಕೆಲಸಗಾರರೊಂದಿಗೆ ಹೊರಟು ಕಟಪಾಡಿಯ ಹತ್ತಿರ ತಲುಪಿದಾಗ ಬೋಟ್‌ನಲ್ಲಿದ್ದ ಅವರು ಹಿಂಬದಿಯ ತುದಿಯಲ್ಲಿ ನಿಂತುಕೊಂಡು ಮೂತ್ರ ಮಾಡುತ್ತಿದ್ದ ವೇಳೆ ಆಯತಪ್ಪಿ ಬೋಟಿನಿಂದ ಸಮುದ್ರಕ್ಕೆ ಬಿದ್ದಿದ್ದರು.

ಇನ್ನು ತೀವ್ರ ಹುಡುಕಾಟದ ಬಳಿಕ ಮೇ 5ರಂದು ರಾಜನ್‌ ಅವರ ಮೃತದೇಹ ಕಾಪು ಬೀಚ್‌ನಲ್ಲಿ ದೊರಕಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಬಾಂಗ್ಲಾ ಹಿಂಸಾಚಾರ: ರಾಜೀನಾಮೆ ನೀಡಿ ದೇಶ ಬಿಟ್ಟು ಪರಾರಿಯಾದ್ರ ಪ್ರಧಾನಿ..! 300ಕ್ಕೂ ಹೆಚ್ಚು ಮಂದಿಯ ಸಾವು, ಬಾಂಗ್ಲಾದಲ್ಲಿ ಸೇನಾಡಳಿತ..?

ಸುಳ್ಯ: ‘ಸೌಜನ್ಯ ಹೋರಾಟಕ್ಕೆ ಉಚಿತ ವಾಹನ ವ್ಯವಸ್ಥೆ ಇಲ್ಲ, ಸುಳ್ಳು ಸುದ್ದಿ ಹಬ್ಬಿಸಬೇಡಿ’ ಪಯಸ್ವಿನಿ ಟೂರಿಸ್ಟ್ ವಾಹನ ಚಾಲಕ ಮಾಲಕರ ಸಂಘದ ಅಧ್ಯಕ್ಷ ಹೇಳಿದ್ದೇನು..?

ಒಂದೇ ನಗರದಲ್ಲಿ 6 ತಿಂಗಳಲ್ಲಿ 14 ಸಾವಿರ ಜನರಿಗೆ ಕಚ್ಚಿದ ಬೀದಿ ನಾಯಿಗಳು..! ಪ್ರಾಣಿ ದಯಾ ಸಂಘಗಳ ಆರೋಪವೇನು..?