ದಕ್ಷಿಣ ಕನ್ನಡ

ಬೆಳ್ಳಂ ಬೆಳಗ್ಗೆ ಮೃತ್ಯುಂಜಯ ನದಿಯಲ್ಲಿ ಒಂಟಿ ಸಲಗ ಸಂಚಾರ..! ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ನ್ಯೂಸ್‌ ನಾಟೌಟ್‌: ಇತ್ತೀಚಿನ ದಿನಗಳಲ್ಲಿ ಮನುಷ್ಯ ಮತ್ತು ಕಾಡುಪ್ರಾಣಿಗಳ ನಡುವೆ ಸಂಘರ್ಷ ಹೆಚ್ಚಾಗುತ್ತಿದೆ. ಈ ನಡುವೆ ಬೆಳ್ತಂಗಡಿ ಸಮೀಪದ ಚಾರ್ಮಾಡಿ ಗ್ರಾಮದ ಮೈಕಾನ್‌, ಪರ್ಲಾಣಿ ಎಂಬಲ್ಲಿ ಒಂಟಿ ಸಲಗವೊಂದು ಇಲ್ಲಿನ ಮೃತ್ಯುಂಜಯ ನದಿಯಲ್ಲಿ ಸಂಚಾರ ನಡೆಸುತ್ತಿದ್ದ ದೃಶ್ಯ ಭಾನುವಾರ ಮುಂಜಾನೆ ಕಂಡುಬಂದಿದೆ.

ಆದರೆ ಕೃಷಿ, ಜನರಿಗೆ ಯಾವುದೇ ತೊಂದರೆ ಉಂಟು ಮಾಡಿಲ್ಲ. ಆದರೂ ಒಂಟಿ ಸಲಗ ಸಂಚಾರದಿಂದ ಸುತ್ತ ಮುತ್ತಲಿನ ಜನರು ಆತಂಕಗೊಂಡಿದ್ದಾರೆ. ಆನೆ ಹೊಸಮಠ ಕಡೆಗೆ ಸಂಚರಿಸಿದೆ ಎಂದು ತಿಳಿದುಬಂದಿದೆ. ಈ ಭಾಗದಲ್ಲಿ ಪದೇ ಪದೆ ಆನೆ ಹಾವಳಿ ಮುಂದುವರಿದಿದ್ದು, ಕೃಷಿ, ಬೆಳೆಗಳಿಗೆ ಹಾನಿ ಮಾಡುತ್ತಿದೆ. ಇದರಿಂದ ಗ್ರಾಮಸ್ಥರು ತೊಂದರೆಗೀಡಾಗಿದ್ದಾರೆ. ಕೂಡಲೇ ಸರ್ಕಾರ, ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Related posts

ಸೌತಡ್ಕ ಮಹಾಗಣಪತಿ ದೇವಸ್ಥಾನದ ಜಾಗ ಮತ್ತು ಹಣ ದುರುಪಯೋಗ..? ದೇವಸ್ಥಾನ ಸಂರಕ್ಷಣಾ ವೇದಿಕೆಯಿಂದ ಅನಿರ್ದಿಷ್ಟಾವಧಿ ಧರಣಿ..!

ಉಡುಪಿಯ ಗರುಡ ಗ್ಯಾಂಗ್ ಗೆ ಹಣಕಾಸಿನ ನೆರವು ನೀಡಿದ್ದ ಉಪ್ಪಿನಂಗಡಿಯ ಮಹಿಳೆ..! ಆಕೆಯನ್ನು ಬಂಧಿಸಿ ಮಂಗಳೂರಿನ ಕಾರಾಗೃಹದಲ್ಲಿ ಇರಿಸಿದ ಪೊಲೀಸರು..!

ಮರ್ಕಂಜ: ಬಸ್ ಅಡ್ಡಗಟ್ಟಿ ಕಾಡಾನೆಗಳ ಪುಂಡಾಟ..!, ರಾತ್ರಿ ಬಸ್ ನಿಲ್ಲಿಸಿ ಬುದ್ಧಿವಂತಿಕೆಯಿಂದ ಲೈಟ್ ಆಫ್ ಮಾಡಿದ ಚಾಲಕ