ಕರಾವಳಿದಕ್ಷಿಣ ಕನ್ನಡ

ಗೋಳಿತೊಟ್ಟು ರಸ್ತೆಯಲ್ಲಿ ತಡರಾತ್ರಿ ಕಾಡಾನೆ ವಾಕಿಂಗ್..! ರಾತ್ರಿ ಸಂಚರಿಸುವ ನಾಗರೀಕರೇ ಎಚ್ಚರ..ಎಚ್ಚರ..!

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಕಾಡಿನಿಂದ ನಾಡಿಗೆ ಆನೆಗಳು ಬರುವುದು ಸಾಮಾನ್ಯವಾಗಿ ಬಿಟ್ಟಿದೆ. ಹಾಗೆ ಬಂದು ಹೋಗುವ ಕಾಡಾನೆಗಳು ಕೃಷಿ ಸಂಪತ್ತನ್ನು ನಾಶ ಮಾಡಿ ಹೋಗುತ್ತಿವೆ.

ಇದೀಗ ಮನುಷ್ಯನ ಜೀವಕ್ಕೇ ಅಪಾಯವನ್ನು ತಂದೊಡ್ಡುವ ಸಾಧ್ಯತೆಗಳು ಹೆಚ್ಚುತ್ತಿವೆ. ಹೌದು, ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಸಮೀಪದ ಗೋಳಿತೊಟ್ಟು ಅನಿಲ ಪರಿಸರದಲ್ಲಿ ಶನಿವಾರ (ಏ.೬) ರಾತ್ರಿ ಕಾಡಾನೆಗಳು ಕಾಣಿಸಿಕೊಂಡಿವೆ. ರಸ್ತೆಯಲ್ಲಿ ಅಡ್ಡಾಡಿವೆ.

ಇಂದು ಕೂಡ ಅದೇ ದಾರಿಯಲ್ಲಿ ಕಾಡಾನೆಗಳು ಬರುವ ಸಾಧ್ಯತೆ ಇದೆ. ಹೀಗಾಗಿ ರಾತ್ರಿ ಮಾರ್ಗದಲ್ಲಿ ಸಂಚರಿಸುವ ನಾಗರೀಕರು ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಸೂಚನೆ ನೀಡಿದ್ದಾರೆ. ಮನೆಯ ನಾಯಿಗಳು ರಾತ್ರಿ ವೇಳೆ ಬೊಗಳಿದರೆ ತೋಟದ ಕಡೆ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಹೋಗಬೇಡಿ ಎಂದು ಮುನ್ಸೂಚನೆ ನೀಡಲಾಗಿದೆ. ಅಲ್ಲದೆ ಕಾಡಾನೆಗಳು ಕಂಡು ಬಂದರೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

Related posts

ಕ್ರಿಕೆಟ್ ವಿಶ್ವಕಪ್ ಕಿರೀಟ ಗೆದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮ್ಯಾನೇಜರ್ ಭಾರತದವರು..!ಆಸ್ಟ್ರೇಲಿಯಾ ಗೆಲುವಿಗೆ ಕಾರಣರಾದ ದ.ಕ. ಜಿಲ್ಲೆಯ ಕಿನ್ನಿಗೋಳಿ ಮೂಲದ ಯುವತಿಯ ಸ್ಫೂರ್ತಿ ಕಥೆ ಇಲ್ಲಿದೆ ಓದಿ…

ಸನಾತನ ಧರ್ಮವನ್ನು ಕೊನೆವರೆಗೂ ವಿರೋಧಿಸುತ್ತೇನೆ ಎಂದ ಉದಯನಿಧಿ ಸ್ಟಾಲಿನ್‌ ! ತನ್ನ ಹೇಳಿಕೆ ಸಮರ್ಥಿಸಿಕೊಳ್ಳುವುದರ ಹಿಂದಿದೆಯಾ ಆ ಒಂದು ಕಾರಣ?

ದೇವಾಲದ ಬಾಗಿಲು ಒಡೆದು ಪೂಜೆ ಸಲ್ಲಿಸಿದ ದಲಿತರು..! ಪೊಲೀಸ್ ಭದ್ರತೆಯಲ್ಲಿ ಗ್ರಾಮ..!