ಕರಾವಳಿಸುಳ್ಯ

ಸಂಪಾಜೆಯ ನೆಲ್ಲಿಕುಮೇರಿ ಬಳಿಯ ಮುತ್ತು ಮಾರಿಯಮ್ಮ ದೇವಸ್ಥಾನಕ್ಕೆ ಆನೆ ದಾಳಿ, ಅಪಾರ ನಷ್ಟ

254

ನ್ಯೂಸ್ ನಾಟೌಟ್ : ಸಂಪಾಜೆಯ ನೆಲ್ಲಿ ಕುಮೇರಿ ಬಳಿಯ ಮುತ್ತು ಮಾರಿಯಮ್ಮ ದೇವಸ್ಥಾನಕ್ಕೆ ಆನೆ ದಾಳಿ ನಡೆದಿದೆ. ಈ ವೇಳೆ ದೇವಸ್ಥಾನದ ಕಾಂಪೌಂಡನ್ನು ಪುಡಿಗೈದು ಬಾಳೆ ಗಿಡಗಳನ್ನು ನಾಶ ಮಾಡಿದೆ. ಅಲ್ಲದೇ ಶೀಟ್ ಗಳನ್ನು ಮುರಿದು ಹಾಕಿವೆ ಎಂದು ತಿಳಿದು ಬಂದಿದೆ.

ಕಳೆದ ಸಲವೂ ಇದೇ ಸ್ಥಳಕ್ಕೆ ಆನೆ ದಾಳಿಯಾಗಿದ್ದನ್ನ ಸ್ಮರಿಸಬಹುದು. ಸಂಪಾಜೆ ಸುತ್ತಮುತ್ತಲಿನ ಪರಿಸರದಲ್ಲಿ ಸತತ ಆನೆ ದಾಳಿ ಪ್ರಕರಣಗಳು ನಡೆಯುತ್ತಿದ್ದರೂ ಇದುವರೆಗೂ ಯಾವುದೇ ಕ್ರಮ ತೆಗೆದು ಕೊಂಡಿಲ್ಲ.ಆನೆ ದಾಳಿಯಿಂದಾಗಿ ಕೃಷಿ ಭೂಮಿಗೆ ಹಾನಿಯಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.ಕಳೆದ ಕೆಲವು ವರ್ಷಗಳಿಂದ ಈ ಘಟನೆ ಈ ಭಾಗದ ಜನರ ನಿದ್ದೆ ಕೆಡಿಸುವಂತೆ ಮಾಡಿದೆ.

See also  ಮಂಗಳೂರು: ರೈಲ್ವೆ ಬೋಗಿಯ ಶೌಚಾಲಯದೊಳಗೆ ನೇಣು ಹಾಕಿಕೊಂಡ ವ್ಯಕ್ತಿ! ವಾರಸುದಾರರಿಗಾಗಿ ಹುಡುಕಾಟ!
  Ad Widget   Ad Widget   Ad Widget   Ad Widget   Ad Widget   Ad Widget   Ad Widget