ಕರಾವಳಿ

ಚುನಾವಣಾ ಬಿಸಿ: ಪುತ್ತೂರು ತಾಲೂಕಿಗೆ ಬಂದಿಳಿದ ಸಿಆರ್‌ಪಿಎಫ್‌ ಪಡೆ

242

ನ್ಯೂಸ್ ನಾಟೌಟ್: ಚುನಾವಣೆ ಸಮೀಪಿಸುತ್ತಿದ್ದಂತೆ ಪೊಲೀಸ್‌ ಇಲಾಖೆ ಹೈ ಅಲರ್ಟ್ ಆಗಿದೆ. ಎಲ್ಲ ಕಡೆ ಬಿಗಿ ಭದ್ರತಾ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಇದೀಗ ಪುತ್ತೂರು ತಾಲೂಕಿನ ಕೆಯ್ಯೂರಿಗೆ ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಆಗಮಿಸಿದೆ. ಐವತ್ತೈದು ಮಂದಿ ಭದ್ರತಾ ಸಿಬ್ಬಂದಿ ಬಂದು ತಲುಪಿದ್ದಾರೆ.

ಅಲ್ಲದೆ ಇವರೊಂದಿಗೆ ಇಪ್ಪತ್ತೈದು ಮಂದಿ ಪೊಲೀಸರು ಕೂಡ ಇದ್ದಾರೆ. ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಬಂದಿಳಿದಿದ್ದಾರೆ. ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಕೆಯ್ಯುರಿನ ಮುಖ್ಯ ರಸ್ತೆಯಲಿ ಕೇಂದ್ರೀಯ ಮೀಸಲು ಪಡೆ ಮತ್ತು ಪೊಲೀಸ್ ಪಡೆ ಪಥ ಸಂಚಲನ ನಡೆಸಿದರು. ಸದ್ಯ ಕಲ್ಲಂಗಡಿ ಕಲ್ಲಂಗಡಿ ಪಾನೀಯ ಸ್ವೀಕರಿಸಿ ಬಸ್‌ ನಲ್ಲಿ ಹಿಂತಿರುಗಿದರು. ಅವರು ಬೆಟ್ಟಂಪಾಡಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

See also  ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ರಿಕ್ಷಾ ಡಿಕ್ಕಿ,ನಾಲ್ಕು ತಿಂಗಳ ಗರ್ಭಿಣಿ ಸ್ಥಳದಲ್ಲೇ ಮೃತ್ಯು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget