ಕ್ರೈಂ

ಎಗ್ ರೈಸ್ ತಿನ್ನುವಾಗ ಗುರಾಯಿಸಿದ್ದಕ್ಕೆ ಹೊಡೆದಾಟ

426

ನ್ಯೂಸ್ ನಾಟೌಟ್: ಎಗ್ ರೈಸ್ ತಿನ್ನುವಾಗ ದುರುಗುಟ್ಟಿದ ಎನ್ನುವ ಕ್ಷುಲ್ಲಕ ವಿಚಾರಕ್ಕೆ ಯುವಕರ ಗುಂಪಿನ ನಡುವೆ ಹೊಡೆದಾಟ ನಡೆದು ಮೂವರು ಗಾಯಗೊಂಡಿರುವ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ. ತಡರಾತ್ರಿ ಬೀದಿ ಬದಿಯ ಸ್ಟಾಲ್ ವೊಂದರಲ್ಲಿ ಇತ್ತಂಡಗಳ ನಡುವೆ ಹೊಡೆದಾಟವಾಗಿದೆ.

ಬಿಸಿಯಾದ ಬಾಣಲೆಯಿಂದ ಬರ್ಬರವಾಗಿ ಹಲ್ಲೆ ನಡೆಸಿರುವ ನಡೆಸಲಾಗಿದೆ. ಓರ್ವನಿಗೆ ಚೂರಿಯಿಂದ ಇರಿಯಲಾಗಿದೆ. ಇಬ್ಬರನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳು ಕೂಡಾ ಊಟಕ್ಕಾಗಿ ಸ್ಟಾಲ್ ಬಳಿ ಬಂದಾಗ ಹೊಡೆದಾಟ ನಡೆದಿದೆ. ಇಬ್ಬರು ಗಾಯಾಳುಗಳು ಪ್ರತ್ಯೇಕವಾಗಿ ದೂರು ಸಲ್ಲಿಸಿದ್ದಾರೆ. ಇಸ್ಟ್ ಎಂಡ್ ರಸ್ತೆಯ ಕಾರ್ತಿಕ್  ಮತ್ತು ಜಯನಗರ 9ನೇ ಬ್ಲಾಕ್ ನ ಡಿ. ಮಣಿಕಂಠ ಹಲ್ಲೆಗೊಳಗಾದವರು. ಇಬ್ಬರು ಸ್ವ ಉದ್ಯೋಗಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ ಕಾರ್ತಿಕ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಚೂರಿ ಇರಿತಕ್ಕೊಳಗಾದ ಮಣಿಕಂಠ ಜಯನಗರ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

See also  ವಿಮಾನ ಮಿಸ್ ಆಯ್ತೆಂದು ರನ್‌ ವೇ ಯಲ್ಲಿ ಓಡಿದ ಈ ಮಹಿಳೆ ಯಾರು? ಆಕೆಯನ್ನು ಬಂಧಿಸಿದ್ದೇಕೆ ಪೊಲೀಸರು?
  Ad Widget   Ad Widget     Ad Widget   Ad Widget   Ad Widget   Ad Widget