ಕರಾವಳಿ

ನೆಲ್ಯಾಡಿ: ಟ್ಯಾಂಕರ್ ನೊಳಗೆ ಮಲಗಿದ್ದ ಚಾಲಕನಿಗೆ ಹೃದಯಾಘಾತ

382

ನ್ಯೂಸ್ ನಾಟೌಟ್ :  ಚಾಲಕರೊಬ್ಬರು ಟ್ಯಾಂಕರ್ ಅನ್ನು ರಸ್ತೆ ಬದಿ ನಿಲ್ಲಿಸಿ ಮಲಗಿದ್ದಲ್ಲಿ ಹೃದಯಾಘಾತವಾಗಿ ಸಾವಿಗೀಡಾದ ಘಟನೆ ನಡೆದಿದೆ.

ಕಡಬ ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಆ.23ರಂದು ಬೆಳಗ್ಗೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೃತಪಟ್ಟವರನ್ನು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮಠದಕೊಪ್ಪಲು ಗ್ರಾಮದ ನಿವಾಸಿ ಅಣ್ಣೇಗೌಡರ ಪುತ್ರ ಮಹಾದೇವ(36) ಎಂದು ತಿಳಿದು ಬಂದಿದೆ. ಸ್ನೇಹಿತ ಟ್ಯಾಂಕರ್ ಚಾಲಕ ಮಳಲಿ ಗ್ರಾಮದ ಚಂದ್ರಹಾಸ ಎಂಬವರ  ಜೊತೆಗೆ ಆ.15ರಿಂದ ಚಾಲಕನಾಗಿ ಮಹಾದೇವ ಬಂದಿದ್ದರು. ಇಬ್ಬರೂ ಟ್ಯಾಂಕರ್‌ನಲ್ಲಿ (ಕೆಎ 19, ಎಬಿ 9393) ಚಾಲಕರಾಗಿದ್ದು ಆ.22ರಂದು ಸಂಜೆ ಮಂಗಳೂರಿನ ಎಂಆರ್‌ಪಿಎಲ್‌ನಿಂದ ಬೆಂಗಳೂರು ಕಡೆಗೆ ಟ್ಯಾಂಕರ್ ಚಲಾಯಿಸಿಕೊಂಡು ಬಂದಿದ್ದು ರಾತ್ರಿ ಸುಮಾರು 11ಗಂಟೆ ವೇಳೆಗೆ ಅಡ್ಡಹೊಳೆಗೆ ತಲುಪಿದ್ದಾರೆ. ಅಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಹಾಗೆ ಮಲಗಿದ ಮಹದೇವ್ ಅವರಿಗೆ ಬೆಳಗ್ಗೆ ೩.೪೦ರ ಸುಮಾರಿಗೆ ಹೃದಯಾಘಾತವಾಗಿದೆ. ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಯಲಿಲ್ಲ ಎಂದು ತಿಳಿದು ಬಂದಿದೆ.

See also  ರಾಜ್ಯಪಾಲರನ್ನು ಭೇಟಿಯಾದ ಪುತ್ತೂರು ಶಾಸಕ..! ಸ್ಪೀಕರ್ ಯು.ಟಿ ಖಾದರ್ ಜೊತೆ ತೆರಳಿದ ಅಶೋಕ್ ರೈ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget