ಕ್ರೈಂವೈರಲ್ ನ್ಯೂಸ್

ಬೀದಿನಾಯಿಗಳ ದಾಳಿಗೆ 11 ವರ್ಷದ ಬಾಲಕನ ದುರಂತ ಅಂತ್ಯ! ವಿದೇಶದಲ್ಲಿದ್ದ ತಂದೆಗೆ ಬದೆರಗಿತು ಮಗುವಿನ ಸಾವಿನ ಬರಸಿಡಿಲು!

197

ನ್ಯೂಸ್ ನಾಟೌಟ್ : ಮನೆಯ ಹಿತ್ತಲಲ್ಲಿ ಆಟವಾಡುವಾಗ ನಿಹಾಲ್ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಕಣ್ಣೂರಿನ ಮುಳುಪಿಲಂಗಾಡ್‌ ನಲ್ಲಿ ಬೀದಿನಾಯಿಗಳು ಕಚ್ಚಿ ಸಾವನ್ನಪ್ಪಿದ 11 ವರ್ಷದ ಬಾಲಕ ನಿಹಾಲ್ ನೌಶಾದ್‌ ನ ಸಮಾಧಿ ಇಂದು ನಡೆದಿದೆ. ತಲಶ್ಶೇರಿ ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿರುವ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿತ್ತು.

ವಿದೇಶದಲ್ಲಿದ್ದ ತಂದೆ ನೌಶಾದ್ ಮಗನ ಸಾವಿನ ಸುದ್ದಿ ಕೇಳಿ ಮನೆಗೆ ಮರಳಿದ್ದಾರೆ. ಆತನ ಮೇಲೆ ನಾಯಿಗಳು ದಾಳಿ ಮಾಡಿದಾಗ ಯಾರಿಗೂ ಕಂಡಿರಲಿಲ್ಲ. ಆದರೆ ನಂತರ ಅಲ್ಲೇ ಹುಲ್ಲು ಹಾಸಿನ ಮೇಲೆ ಆತ ಶವವಾಗಿ ಬಿದ್ದಿದ್ದನು ಎನ್ನಲಾಗಿದೆ. ದಾರುಣವಾಗಿ ಪ್ರಾಣ ಕಳೆದುಕೊಂಡ ನಿಹಾಲ್ ಮೃತದೇಹ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ನಿಹಾಲ್ ಈ ಹಿಂದೆಯೂ ಈ ರೀತಿ ನಾಪತ್ತೆಯಾಗಿದ್ದ ಎಂದು ಸ್ಥಳೀಯರು ಹೇಳುದ್ದಾರೆ. ಅವನು ಮನೆಗೆ ಬರದಿದ್ದರೂ ಎಲ್ಲಾದರೂ ಹೋಗಿರುತ್ತಾನೆ ಇನ್ನೇನು ಬರುತ್ತಾನೆ ಎಂದು ಸುಮ್ಮನಾಗಿದ್ದಾರೆ. ಆದರೆ ಎಷ್ಟು ಸಮಯವಾದರೂ ಸಹ ಮನೆಗೆ ಅವನು ಮರಳಲಿಲ್ಲ ಎಂದು ಪಾಲಕರು ಕಂಗಾಲಾಗಿ ಹುಡುಕಾಟ ನಡೆಸಿದ್ದಾರೆ. ಮನೆಯಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಆತ ಶವವಾಗಿ ಪತ್ತೆಯಾಗಿದ್ದಾನೆ ಎಂದು ಮನೆಯವರು ತಿಳಿಸಿದ್ದಾರೆ.

See also  ಸುಳ್ಯ: ಬಸ್ ನಲ್ಲಿ ಬರುವಾಗ ಹಿಂದೂ ಯುವತಿಯ ಮೈಮುಟ್ಟಿದ ಎಂದು ಯುವಕನಿಗೆ ಹಿಗ್ಗಾಮುಗ್ಗಾ ಥಳಿತ, ಸರ್ಕಾರಿ ಆಸ್ಪತ್ರೆಗೆ ದಾಖಲಾದ ಯುವಕ
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget