ಸುಳ್ಯ: ನ್ಯಾಯಾಲಯಕ್ಕೆ ಸಾಕ್ಷಿ ನುಡಿಯಲು ಸುಳ್ಯಕ್ಕೆ ಮಂಗಳವಾರ ಬಂದಿದ್ದ ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ರವರಿಗೆ ಸುಳ್ಯದ ಪೈಚಾರ್ ಜಂಕ್ಷನ್ ಬಳಿ ಪಕ್ಷದ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ. ಎಮ್. ಶಾಹಿದ್ ನೇತೃತ್ವದಲ್ಲಿ ಕಾಂಗ್ರೆಸ್ ತಾಲೂಕು ಅಲ್ಪಸಂಖ್ಯಾತ ಅಧ್ಯಕ್ಷ ಜಿ. ಕೆ. ಹಮೀದ್, ರಾಜ್ಯ ಅಲ್ಫಾಸಂಖ್ಯಾತ ಘಟಕ ಸಂಯೋಜಕ ತಾಜ್ ಮಹಮ್ಮದ್, ಜಾಲ್ಸುರ್ ತಾಲೂಕು ಪಂಚಾಯತ್ ಕ್ಷೇತ್ರದ ಅಧ್ಯಕ್ಷ ಮಜೀದ್ ಪೈಚಾರ್, ಸುಳ್ಯ ನಗರ ಅಲ್ಫಾಸಂಖ್ಯಾತ ಘಟಕದ ಅಧ್ಯಕ್ಷ ಉಮ್ಮರ್ ಕುರುಂಜಿ, ಪಿ. ಎ. ಮಹಮ್ಮದ್, ಶರೀಫ್ ಕಂಠಿ, ಸಿದ್ದಿಕ್ ಕೊಕ್ಕೋ, ಸಂಪಾಜೆ ಪಂಚಾಯತ್ ಸದಸ್ಯ ಪಿ. ಕೆ ಅಬೂಸಾಲಿ ಆರಂತೋಡು ತಾಲೂಕು ಪಂಚಾಯತ್ ಕ್ಷೇತ್ರದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ರಹೀಮ್ ಬೀಜದಕಟ್ಟೆ,, ಉಬೈಸ್ ಗೂನಡ್ಕ ಪರಶುರಾಮ ಚಿಳ್ತಾಡ್ಕ, ಕಾಂಗ್ರಸ್ ಮುಖಂಡ ಬಶೀರ್ ಆರ್. ಬಿ., ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಯು. ಪಿ. ಬಶೀರ್ ಬೆಳ್ಳಾರೆ, ಅಝರ್ ಚೆರೂರ್, ಇರ್ಷಾದ್ ಪೇರಡ್ಕ, ರಾಜ್ಯ ಕಾಂಗ್ರೆಸ್ ನಾಯಕಿ ವಾಹಿದ ಇಸ್ಮಾಯಿಲ್, ಸಾಮಾಜಿಕ ಜಾಲತಾಣದ ರಾಜ್ಯ ಪ್ರದಾನ ಕಾರ್ಯದರ್ಶಿ ರಿಯಾಜ್ ಸಲೀಂ ಪೆರುಂಗೋಡಿ, ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳು ಹಾಜರಿದ್ದರು.