ಕ್ರೀಡೆ/ಸಿನಿಮಾವೈರಲ್ ನ್ಯೂಸ್

ಕಪ್ಪು ಬಣ್ಣದವ ಎಂದು ಟೀಕೆಗೊಳಗಾಗಿದ್ದ ವ್ಯಕ್ತಿಯನ್ನೇ ಮದುವೆಯಾದಳು ಆ ಸುಂದರಿ ನಟಿ..! ಬಣ್ಣಕ್ಕೂ ಮಿಗಿಲಾದ ಪ್ರೀತಿಯ ನಂಬಿಕೆ ಸುಳ್ಳಾಗಲಿಲ್ಲ, ಪ್ರೀತಿಸಿದ ಹುಡುಗನ ಸಾಧನೆಗೆ ಈಗ ಸಿಕ್ಕಿತು ಬಿಗ್ ಸಕ್ಸಸ್..!

193

ನ್ಯೂಸ್ ನಾಟೌಟ್: ಕೆಲವರಿಗೆ ಕಪ್ಪು ಅಂದ್ರೆ ಅಸಹನೆ. ಒಂದು ರೀತಿಯ ತಿರಸ್ಕಾರ ಭಾವನೆ. ಆದರೆ ಶುದ್ಧವಾದ ಪ್ರೀತಿ ಎಲ್ಲದಕ್ಕೂ ಮಿಗಿಲು. ಅದಕ್ಕೆ ಬಣ್ಣದ ಅಮಲು ಇರುವುದಿಲ್ಲ ಅನ್ನುವುದು ಸಾಬೀತಾಗಿದೆ.

ಹೌದು, ಆತ ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆಯುತ್ತಿದ್ದ ಯುವ ಪ್ರತಿಭಾವಂತ ನಿರ್ದೇಶಕ. ಆದರೆ ಆತನ ಬಣ್ಣದಿಂದ ಕೆಲವು ಅವಕಾಶಗಳು ಕೂಡ ತಪ್ಪಿ ಹೋದವು. ಆದರೆ 2014ರಲ್ಲಿ ಆತನನ್ನು ಹಾಲಿನಂತೆ ಬೆಳಗ್ಗೆ ಇರುವ ನಟಿ ಕೃಷ್ಣ ಪ್ರಿಯ ಮದುವೆಯಾಗುವುದಾಗಿ ಘೋಷಿಸಿದಳು. ಆಗ ಸದ್ದಾಗಿದ್ದ ಹೆಸರೇ ಆಟ್ಲೀ ಅರುಣ್ ಕುಮಾರ್‌.

ಇಬ್ಬರ ನಡುವೆ ಮದುವೆಗೆ ಎಲ್ಲ ತಯಾರಿ ನಡೆಯಿತು. ಆಟ್ಲೀ ಅರುಣ್ ಕುಮಾರ್ ಅವರನ್ನು ಕೃಷ್ಣ ಪ್ರಿಯ ವಿವಾಹವಾದರು. ಈ ಸಮಯದಲ್ಲಿ ಈ ಜೋಡಿ ಭಾರಿ ಟ್ರೋಲ್ ಗೆ ಗುರಿಯಾಗಿತ್ತು. ಬಹುಶಃ ಈ ಜೋಡಿ ಟ್ರೋಲ್ ಆದಷ್ಟು ಭಾರತದ ಯಾವ ಜೋಡಿಯೂ ಟ್ರೋಲ್ ಆಗಿರಲಿಲ್ಲ ಅನ್ನಿಸುತ್ತೆ.

” ದುಡ್ಡಿದ್ದರೆ ಮಂಗನನ್ನು ಮದುವೆ ಆಗುತ್ತಾರೆ ಈ ಹೆಣ್ಣು ಮಕ್ಕಳು, ಈ ಕರಿಯನಿಗೆ ಈ ಗೊಂಬೆ ಹೇಗೆ ಬಿದ್ದಳು? ಅದು ಇದು ಅಂತ ದಿನನಿತ್ಯ ಅರುಣ್ ಟ್ರೊಲ್ ಆದ್ರು. ಅರುಣ್ ಯಶಸ್ವಿ ನಿರ್ದೇಶಕನಾಗುವುದಕ್ಕೆ ಹತ್ತಾರು ವರ್ಷ ಶ್ರಮಪಟ್ಟಿದ್ದಾರೆ. ಅವರು ಸವೆಸಿದ ಹಾದಿ ಕಲ್ಲು ಮುಳ್ಳಿನದ್ದೆ ಆಗಿದೆ.

ಬಾಲಿವುಡ್ ಬಾದ್ ಶಾ ಶಾರುಖ್ ನಟಿಸಿರುವ ಆಟ್ಲೀ ನಿರ್ದೇಶನದ “ಜವಾನ್” ಸಿನಿಮಾ ಈಗ ಸೂಪರ್ ಹಿಟ್ ಆಗಿದೆ. ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಟ್ರೊಲ್ ಮಾಡಿದವರು ಅಂದು ಅರುಣ್ ಅವರ ಆಕರ್ಷಕ ಮತ್ತು ಅಪರೂಪದ ನಗು, ಮುಖಲಕ್ಷಣಗಳನ್ನ ಗಮನಿಸಿರಲಿಲ್ಲ ಅನಿಸುತ್ತೆ ಎಂದು ಫೇಸ್ ಬುಕ್ ನಲ್ಲಿ ಹರೀಶ್ ಗಂಗಾಧರ್ ಅನ್ನುವವರು ಬರೆದಿದ್ದಾರೆ.

ಕೆಲವು ಸಲ ವರ್ಣ, ಜಾತಿ, ವರ್ಗ ಮೀರಿ ಕ್ಷಮತೆ, ಪ್ರತಿಭೆಯನ್ನು ಗುರುತಿಸಲಾಗದ ಅಂಧರು ಕೂಡ ಈ ಟ್ರೊಲ್ ಸೇನೆಯವರೆಂದು ಇರುತ್ತಾರೆ ಅನ್ನುವುದು ನಿಜವಾಗಿದೆ.

See also  ತಲೆಗೆ ಗುಂಡು ಹಾರಿಸಿಕೊಂಡ 17ರ ಬಾಲಕ..! ಶೂಟಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ ಹುಡುಗ ಆತ್ಮಹತ್ಯೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget