ಕರಾವಳಿ

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಅವಮಾನಿಸಿದ ಕಿಡಿಗೇಡಿಗಳು

382

ನ್ಯೂಸ್ ನಾಟೌಟ್ : ಪವಿತ್ರ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ಶುಭಾಶಯ ಕೋರಿ ಹಾಕಿದ್ದ ಬ್ಯಾನರ್ ಅನ್ನು ದುಷ್ಕರ್ಮಿಗಳು ಫ್ರೇಮ್ ಸಹಿತ ಕಿತ್ತುಕೊಂಡು ಹೋಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪದ ಉಪ್ಪಾರಪಳಿಕೆ ಎಂಬಲ್ಲಿ ನಡೆದಿದೆ.

ಇತ್ತೀಚೆಗೆ ಧರ್ಮದರ್ಶಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿದ್ದರು. ಈ ಸಂದರ್ಭದಲ್ಲಿ ಉಪ್ಪಾರಪಳಿಕೆಯ ಶ್ರದ್ಧಾ ಗೆಳೆಯರ ಬಳಗ ವೀರೇಂದ್ರ ಹೆಗ್ಗಡೆಯವರನ್ನು ಅಭಿನಂದಿಸಿ ಫ್ರೇಮ್ ಸಹಿತ ದೊಡ್ಡ ಬ್ಯಾನರ್ ಅನ್ನು ಉಪ್ಪಾರಪಳಿಕೆ ಎಂಬಲ್ಲಿ ಹಾಕಿದ್ದರು. ಆದರೆ ಕಳೆದ ಮೂರು ದಿನಗಳ ಹಿಂದೆ ಅದನ್ನು ಯಾರೋ ದುಷ್ಕರ್ಮಿಗಳು ರಾತ್ರೋ ರಾತ್ರಿ ಹೊತ್ತೊಯ್ದಿದ್ದಾರೆ.

ಉಪ್ಪಾರಪಳಿಕೆಯಲ್ಲಿ ಹಾಕಿದ್ದ ಬ್ಯಾನರ್

ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಮಾತ್ರವಲ್ಲ ಇದು ಶ್ರದ್ಧಾ ಗೆಳೆಯರ ಬಳಗದ ಏಳಿಗೆ ಸಹಿಸದೆ ಹಾಗೂ ಡಾ ವೀರೇಂದ್ರ ಹೆಗ್ಗಡೆಯವರ ವಿರೋಧಿಗಳು ಇಂತಹ ಕೃತ್ಯ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೂಡಲೇ ದುಷ್ಕರ್ಮಿಗಳು ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಶ್ರೀ ಮಂಜುನಾಥ ಸ್ವಾಮಿಯೇ ಅಂಥಹವರನ್ನು ನೋಡಿಕೊಳ್ಳಲಿ ಎನ್ನುವ ಸಂದೇಶವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವೈರಲ್ ಆಗುತ್ತಿರುವ ಪೋಸ್ಟ್‌
See also  ಬಂಟ್ವಾಳ: ಗುಡ್ಡ ಕುಸಿದು ರಸ್ತೆಗೆ ಉರುಳಿದ ಬೃಹತ್‌ ಬಂಡೆ..! ,ಲೊರೊಟ್ಟೊ ಜಂಕ್ಷನ್‌ನಿಂದ ಮಹಲ್ ತೋಟ ಸಂಪರ್ಕ ಕಡಿತ
  Ad Widget   Ad Widget   Ad Widget   Ad Widget   Ad Widget   Ad Widget   Ad Widget