ದೇಶ-ಪ್ರಪಂಚ

ಅಯೋಧ್ಯೆಯ ರಾಮಲಲ್ಲಾನನ್ನು ಕಾಣಲು ಭಕ್ತ ಸಾಗರ..! ದೂರದೂರುಗಳಿಂದ ಓಡೋಡಿ ಬರುತ್ತಿರುವ ಭಕ್ತರು..!ಇನ್ಮುಂದೆ ನಿತ್ಯ 1 ಗಂಟೆ ರಾಮಮಂದಿರ ಬಂದ್ ಮಾಡುತ್ತಿರುವುದೇಕೆ?

ನ್ಯೂಸ್‌ ನಾಟೌಟ್‌ :ಇದೀಗ ಅಯೋಧ್ಯೆಯು ಭಕ್ತರಿಂದ ತುಂಬಿ ತುಳುಕಿದೆ.ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಲಲ್ಲಾನನ್ನು (Ayodhya Ram Mandir) ಕಾಣಲೆಂದು ಭಕ್ತರು ಓಡೋಡಿ ಬರುತ್ತಿದ್ದು, ಪ್ರಾಣಪ್ರತಿಷ್ಠಾನೆ ಆದಾಗಿಂದ ಇಲ್ಲಿ ಪ್ರತಿದಿನವೂ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ.

ಈ ಪ್ರಯುಕ್ತ ರಾಮಮಂದಿರಕ್ಕೆ ಹೊಸ ಕಳೆ ಬಂದಿದೆ.ಅಯೋಧ್ಯೆಯಲ್ಲಿ ಜನಸಾಗರವೇ ಕಂಡು ಬಂದಿದ್ದು, ವಿಡಿಯೋಗಳು ಸಕತ್ ವೈರಲ್ ಆಗುತ್ತಿದೆ.ಅದರಲ್ಲೂ ವೀಕೆಂಡ್‌ ಟೈಮ್‌ನಲ್ಲಿ ಹೆಚ್ಚಿನವರು ಇಲ್ಲಿ ಬಂದು ಪ್ರಭು ಶ್ರೀರಾಮನ ದರ್ಶನವನ್ನು ಪಡಿತಿದ್ದಾರೆ.ಕಳೆದ ವೀಕೆಂಡ್‌ನಲ್ಲಿಯೂ ಜನಸಂದಣಿ ದಟ್ಟವಾಗಿಯೇ ಇತ್ತು ಎಂದು ವರದಿಯಾಗಿದೆ. ಮುಂಜಾನೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತಿದ್ದು, ಬೆಳಗ್ಗೆಯಾಗುತ್ತಿದ್ದಂತೆಯೇ ಅಯೋಧ್ಯೆಯಲ್ಲಿ ಜನಸಂದಣಿ ಹೆಚ್ಚಾಗಿದೆ.

ಫೆ.10ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಲಕ್ಷಕ್ಕೂ ಹೆಚ್ಚು ಮಂದಿ ದರ್ಶನ ಪಡೆದಿದ್ದರು. ಸಾವಿರಾರು ಮಂದಿ ಭಕ್ತರು ಪ್ರಯಾಗ್ ರಾಜ್ ನಲ್ಲಿ ಪುಣ್ಯಸ್ನಾನ ಮಾಡಿ ರಾಮ ಮಂದಿರದತ್ತ ದೌಡಾಯಿಸುತ್ತಿರುವ ವೀಡಿಯೋ ಕೂಡ ವೈರಲ್‌ ಆಗಿತ್ತು.ಕಳೆದ ವಾರ ವೀಕೆಂಡ್‌ ಹಾಗೂ ಅಮಾವಾಸ್ಯೆ ಹಿನ್ನೆಲೆ ಅಯೋಧ್ಯೆಗೆ ಭಕ್ತ ಸಾಗರವೇ ಹರಿದುಬಂದಿತ್ತು. ಭಕ್ತರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯು ವಿಐಪಿ ಗೇಟ್ ಕೂಡ ತೆರೆಯಲಾಗಿತ್ತು.

ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದರು.ಇನ್ನೊಂದೆಡೆ ಭಕ್ತರಿಗೆ ಲಾಕರ್ ವ್ಯವಸ್ಥೆ ಸಿಗದಿದ್ದರಿಂದ ಮೊಬೈಲ್ ಫೋನ್, ಲಗೇಜ್ ಜೊತೆಯೇ ಮಂದಿರದೊಳಗೆ ನುಗ್ಗಿದ್ದರು.ಇನ್ನು ರಾಮಲಲ್ಲಾ 5 ವರ್ಷದ ಪುಟ್ಟ ಮಗು. ಹೀಗಾಗಿ ಆತ ದೀರ್ಘಕಾಲ ಎಚ್ಚರವಿದ್ದು, ಹೆಚ್ಚು ಒತ್ತಡ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ವಿಶ್ರಾಂತಿಗಾಗಿ ಮಧ್ಯಾಹ್ನ 12:30 ಯಿಂದ 1:30 ವರೆಗೆ ಮುಚ್ಚಲು ತೀರ್ಮಾನಿಸಿರುವುದಾಗಿ ದೇಗುಲದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ ಮಾಹಿತಿ ನೀಡಿದ್ದಾರೆ.

Related posts

‘ಅಮುಲ್’ ​ ‘ಮದರ್ ಡೈರಿ’ ಹಾಲಿನ ದರದಲ್ಲಿ ಹೆಚ್ಚಳ..! ನಂದಿನಿ ಹಾಲಿನ ಬೆಲೆಯೂ ಏರಿಕೆಯಾಗುವ ಸಾಧ್ಯತೆ..!

ಹುಡುಗಿ ಸಿಕ್ತಿಲ್ಲ ಎಂದು ಸಿ.ಎಂ.ಗೆ ಲೆಟರ್ ಬರೆದ 3 ಅಡಿ ಉದ್ದದ ವ್ಯಕ್ತಿ: ಕೊನೆಗೂ ಮದುವೆಯಾದ…

‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಉತ್ತರಪ್ರದೇಶದಲ್ಲಿ ತೆರಿಗೆ ಇಲ್ಲ! ಪಶ್ಚಿಮಬಂಗಾಳದಲ್ಲಿ ಯಾಕೆ ನಿಷೇಧ..?