ಕರಾವಳಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದಿನ ಸಿನಿಮಾಗೆ ಕರಾವಳಿ ಬೆಡಗಿ ಆಯ್ಕೆ..!ಪುತ್ತೂರಿನ ಆ ಚೆಲ್ವೆಯ ಹೆಸರೇನು ಗೊತ್ತಾ?ಯಾರೀಕೆ?ಇಲ್ಲಿದೆ ಡಿಟೇಲ್ಸ್‌..

135

ನ್ಯೂಸ್‌ ನಾಟೌಟ್‌ : ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ಕಾಟೇರ’ ಚಿತ್ರ ಭರ್ಜರಿ ಸಕ್ಸಸ್ ಕಂಡಿದೆ.ಇದೀಗ ಇವರು  ‘ಡೆವಿಲ್ ದಿ ಹೀರೊ ಸಿನಿಮಾದಲ್ಲಿ ತೆರೆ ಮೇಲೆ ಬರಲು ಭಾರಿ ಸಿದ್ಧತೆ ನಡೆಸುತ್ತಿದ್ದಾರೆ. ಈ ಸಿನಿಮಾದ ಹೆಸರು ಕೂಡ ಭಾರೀ ಸುದ್ದಿಯಲ್ಲಿದ್ದು, ಈ ವರ್ಷ ನಟ ದರ್ಶನ್ ಹುಟ್ಟುಹಬ್ಬಕ್ಕೆ ಚಿತ್ರತಂಡ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಪ್ಲ್ಯಾನ್ ಮಾಡ್ತಿದೆ .

‘ಡೆವಿಲ್’ ದಿ ಹೀರೊ  ಚಿತ್ರದ ಸ್ಟಾರ್‌ಕಾಸ್ಟ್ ಬಗ್ಗೆ ಕೂಡ ಜನ ಹುಡುಕಾಡಲು ಶುರು ಮಾಡಿದ್ದು, ಬಿಸಿಬಿಸಿ ಚರ್ಚೆ ನಡೀತಿದೆ. ಈ ಸಿನಿಮಾಗೆ ದರ್ಶನ್‌ ಹೀರೋ ಆದ್ರೆ ನಟಿ ಯಾರಿರಬಹುದು ಎನ್ನುವ ಕುತೂಹಲ ಸಹಜವಾಗಿಯೇ ಮೂಡಿದೆ.ಅಂದ ಹಾಗೆ ಈ ಸಿನಿಮಾಗೆ ಕರಾವಳಿ ಮೂಲದ ಬೆಡಗಿಯೊಬ್ಬಳು ಆಯ್ಕೆಯಾಗಿದ್ದಾಳೆ ಅನ್ನೋ ಸುದ್ದಿ ಹರಿದಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ರಚನಾ ರೈ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಭಾರೀ ಸದ್ದು ಮಾಡ್ತಿದ್ದು, ಆದರೆ ಈ ಚಿತ್ರದ ನಾಯಕಿ ಯಾರು ಎನ್ನುವುದು ಅಧಿಕೃತವಾಗಿ ಘೋಷಣೆ ಆಗಿಲ್ಲ. ಆದರೆ ರಚನಾ ರೈ ಆಯ್ಕೆ ಖಚಿತ ಎನ್ನುವ ಮಾತುಗಳು ಒಂದು ಕಡೆಯಿಂದ ಕೇಳಿ ಬರ್ತಿದೆ. 

ಹೌದು.. ಸಿನಿಮಾದ ನಾಯಕಿಯ ಹೆಸರು ಹೊರಬರುತ್ತಿದ್ದಂತೆ ಆಕೆ ಯಾರು, ಹಿನ್ನೆಲೆ ಏನು ಎಂದು ದರ್ಶನ್ ಫ್ಯಾನ್ಸ್‌ ಹುಡುಕಲು ಆರಂಭಿಸಿದ್ದಾರೆ. ರಚನಾ ರೈ ಪುತ್ತೂರಿನಲ್ಲಿ ಹುಟ್ಟಿ ಬೆಳೆದವರು ಮಾಡೆಲಿಂಗ್ ಕ್ಷೇತ್ರದಲ್ಲಿ ಗುರ್ತಿಸಿಕೊಳ್ಳುವುದರ ಜೊತೆಗೆ ‘ಸರ್ಕಸ್’ ಎನ್ನುವ ತುಳು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಈ ನಟಿ ಸದ್ಯ ಧನ್ವೀರ್ ಗೌಡ ನಟನೆಯ ‘ವಾಮನ’ ಚಿತ್ರದಲ್ಲಿ ಕೂಡ ನಟಿಸಿದ್ದು, ಈ ಸಿನಿಮಾ ಮೂಲಕ ಕೋಸ್ಟಲ್‌ವುಡ್‌ನಿಂದ ಸ್ಯಾಂಡಲ್‌ವುಡ್‌ಗೆ ಬಂದಿದ್ದಾರೆ. 

ಇದೀಗ ‘ಡೆವಿಲ್’ ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ರಚನಾ ರೈ ಕಾಣಿಸಿಕೊಳ್ಳುತ್ತಾರೆ ಎನ್ನುವ ಊಹಾಪೋಹ ಶುರುವಾಗಿದ್ದು, ಈ ಸುದ್ದಿ ಕೇಳಿಬರುತ್ತಿದ್ದಂತೆ ಅಭಿಮಾನಿಗಳು ಆಕೆಯ ಇನ್‌ಸ್ಟಾಗ್ರಾಂ ಅಕೌಂಟ್ ತಡಕಾಡಲು ಆರಂಭಿಸಿದ್ದಾರೆ. ದಿಢೀರ್ ಆಕೆಯ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆಯು ಹೆಚ್ಚಾಗಿದ್ದು, ದರ್ಶನ್ ಫ್ಯಾನ್ಸ್ ಇನ್‌ಸ್ಟಾದಲ್ಲಿ ಆಕೆಯನ್ನು ಹೆಚ್ಚು ಫಾಲೋ ಮಾಡಲು ಆರಂಭಿಸಿದ್ದಾರೆ. ಇನ್ನು ಆಕೆಯ ಫೋಟೊಗಳು ಸಖತ್ ವೈರಲ್ ಆಗುತ್ತಿದೆ. 

ಈಗಾಗಲೇ ‘ಡೆವಿಲ್’ ದಿ ಹೀರೊ ಚಿತ್ರದ ಮುಹೂರ್ತ ಸಹ ನೆರವೇರಿದ್ದು, ನಿರ್ದೇಶಕ ಮಿಲನಾ ಪ್ರಕಾಶ್ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದಕ್ಕೂ ಮುಂಚೆ ದರ್ಶನ್ ಹಾಗೂ ಪ್ರಕಾಶ್ ಕಾಂಬಿನೇಷನ್‌ನಲ್ಲಿ ‘ತಾರಕ್’ ಚಿತ್ರ ಮೂಡಿಬಂದಿದ್ದು, ಹಾಗಾಗಿ ಸಹಜವಾಗಿಯೇ ಈ ಜೋಡಿಯ ಎರಡನೇ ಸಿನಿಮಾ ಕುತೂಹಲ ಮೂಡಿಸಿದೆ. 

See also  ಮತದಾನ ಮಾಡದವರು ಬದುಕಿದ್ದೂ ಸತ್ತಂತೆ..! ಸತ್ತ ಪ್ರಜೆಗಳಿಗೆ ನಮ್ಮ ಶ್ರದ್ದಾಂಜಲಿ, ಸಿಟ್ಟಿಗೆದ್ದ ಜನರಿಂದ ಬ್ಯಾನರ್ ಅಳವಡಿಕೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget